ಐಜಿಪಿಗೆ ಗದರಿದ ಸಿಎಂ ಬೊಮ್ಮಾಯಿ

185

ಪ್ರಜಾಸ್ತ್ರ ಸುದ್ದಿ

ತುಮಕೂರು: ಲಿಂಗಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಸಿದ್ದಗಂಗಾ ಮಠದಲ್ಲಿ ತ್ರಿವಿಧ ದಾಸೋಹ ದಿನಾಚರಣೆ ಆಚರಿಸಲಾಯಿತು. ಸಿಎಂ ಬೊಮ್ಮಾಯಿ, ಸಿದ್ದಲಿಂಗ ಸ್ವಾಮೀಜಿ, ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಕಾನೂನು ಹಾಗೂ ಸಂಸದೀಯ ಸಚಿವ ಜೆ.ಸಿ ಮಾಧುಸ್ವಾಮಿ,  ಸಂಸದ ಬಸವರಾಜ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಈ ಕಾರ್ಯಕ್ರಮಕ್ಕೂ ಮೊದಲು ಸೇರಿದ್ದ ಅಪಾರ ಸಂಖ್ಯೆಯ ಭಕ್ತರನ್ನು ನೋಡಿದ ಸಿಎಂ ಬೊಮ್ಮಾಯಿ, ಐಜಿಪಿ ವಿರುದ್ಧ ಗುಡುಗಿದರು. ಕೇಂದ್ರ ವಲಯ ಐಜಿಪಿ ಚಂದ್ರಶೇಖರ್, ಡಿವೈಎಸ್ಪಿ ಶ್ರೀನಿವಾಸ್ ವಿರುದ್ಧ ಗರಂ ಆದ ಸಿಎಂ, ಇಷ್ಟೊಂದು ಸೀನಿಯರ್ ಅಧಿಕಾರಿಯಾಗಿದ್ದೀರಿ ಜನ ಸೇರಿಸಬಾರದು ಎಂದು ನಿಮ್ಗೆ ಗೊತ್ತಾಗುವುದಿಲ್ಲವಾ ಎಂದು ಗದರಿದ ಪ್ರಸಂಗ ನಡೆದಿದೆ.




Leave a Reply

Your email address will not be published. Required fields are marked *

error: Content is protected !!