ಪ್ರಜಾಸ್ತ್ರ ಅಪರಾಧ ಸುದ್ದಿ
ಬಸವನಬಾಗೇವಾಡಿ: ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ಠಾಣೆ ಪೊಲೀಸರು ಸರಗಳ್ಳರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಲಕೇರಿ ಗ್ರಾಮದ ಶರಣಪ್ಪ ಸಿದ್ದಪ್ಪ ಕತ್ತಿ(27) ಹಾಗೂ ನಾಸೀರ ಅಹ್ಮದ ಪೀರಸಾಬ ಪಟೇಲ್ ಉರ್ಫ್ ಬಿರಾದಾರ(27) ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತ ಸರಗಳ್ಳರಿಂದ 34.67 ಗ್ರಾಂ ಚಿನ್ನದ ಸರ ವಶಕ್ಕೆ ಪಡೆಯಲಾಗಿದೆ. ಕಳೆದ ಅಕ್ಟೋಬರ್ 3ರಂದು ಪಟ್ಟಣದ ಐಡಿಎಫ್ ಸಿ ಬ್ಯಾಂಕ್ ಹತ್ತಿರ ಅಂಗನವಾಡಿ ಕಾರ್ಯಕರ್ತೆ ಕಮಲಾ ಶಿವಪ್ಪ ರತ್ತಳ್ಳಿ ಎಂಬುವರ ಸರಗಳ್ಳತನ ಮಾಡಿದರು ಎಂದು ವಿಜಯಪುರ ಎಸ್ಪಿ ಅನುಪಮ ಅಗ್ರವಾಲ ಮಾಹಿತಿ ನೀಡಿದ್ದಾರೆ.