ಶಿರಾ, ಆರ್ ಆರ್ ನಗರ ಬಿಜೆಪಿ ಅಭ್ಯರ್ಥಿ ಘೋಷಣೆ

269

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ತುಮಕೂರಿನ ಶಿರಾ ವಿಧಾನಸಭೆ ಹಾಗೂ ಬೆಂಗಳೂರಿನ ಆರ್.ಆರ್ ನಗರ ವಿಧಾನಸಭೆಯ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳನ್ನ ಘೋಷಣೆ ಮಾಡಲಾಗಿದೆ. ತೀವ್ರ ಕುತೂಹಲ ಮೂಡಿಸಿದ್ದ ಆರ್.ಆರ್ ನಗರಕ್ಕೆ ಮುನಿರತ್ನ ಅಭ್ಯರ್ಥಿಯಾಗಿದ್ದಾರೆ.

ಇನ್ನು ಶಿರಾ ಕ್ಷೇತ್ರಕ್ಕೆ ರಾಜೇಶಗೌಡ ಹೆಸರನ್ನ ಬಿಜೆಪಿ ಹೈಕಮಾಂಡ್ ಫೈನಲ್ ಮಾಡಿದೆ. ಮುನಿರತ್ನ ವಿರುದ್ಧ 2018ರ ಚುನಾವಣೆಯಲ್ಲಿ ಅಕ್ರಮ ಮತದಾರರ ಚೀಟಿ ಸಂಬಂಧ, ತುಳುಸಿ ಮುನಿರಾಜು ಸಲ್ಲಿಸಿದ್ದ ಅರ್ಜಿ ವಜಾಗೊಂಡ ಬೆನ್ನಲ್ಲೇ ಬಿಜೆಪಿ ಮುನಿರತ್ನಗೆ ಟಿಕೆಟ್ ಘೋಷಿಸಿದೆ. ಅಲ್ಲಿಗೆ ಮುನಿರತ್ನಗೆ ಇದ್ದ ಟೆನ್ಷನ್ ಕಡಿಮೆಯಾಗಿದೆ.




Leave a Reply

Your email address will not be published. Required fields are marked *

error: Content is protected !!