ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಸಿಲಿಕಾನ್ ಸಿಟಿಯ ಆರ್.ಆರ್ ನಗರದಲ್ಲಿ ಬಿಜೆಪಿ ಮುನಿರತ್ನ ಹಾಗೂ ಕಾಂಗ್ರೆಸ್ ನ ಕುಸುಮಾ ನಡುವೆ ಹಣಾಹಣಿ ಇದೆ. ಇದೀಗ ಪಕ್ಷೇತರ ಅಭ್ಯರ್ಥಿಯೊಬ್ಬರ ಪೋಸ್ಟರ್ ನಲ್ಲಿ ಪಾಕ್ ಧ್ವಜವಿದೆ. ಅಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎಂದು ಬರೆಯಲಾಗಿದೆ. ಈ ಮೂಲಕ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಜಿದ್ದಾಜಿದ್ದು ಶುರುವಾಗಿದೆ.
ಪಕ್ಷೇತರ ಅಭ್ಯರ್ಥಿ ಯಾರಬ್ ಎಂಬಾತ ಮುನಿರತ್ನ ಹಿಂಬಾಲಕ. ಆತನನ್ನು ತಾವು ಸ್ಪರ್ಧಿಸುವಂತೆ ಮಾಡಿ, ಇದೀಗ ಕಾಂಗ್ರೆಸ್ ಬೆಂಬಲಿತ ಎಂದು ಪೋಸ್ಟರ್ ಮಾಡಿಸಿ ಅದರಲ್ಲಿ ಪಾಕ್ ಧ್ವಜದ ಚಿತ್ರ ಮುದ್ರಿಸಿರುವ ವಾಮಮಾರ್ಗ ತಿಳಿದಿದೆ. ಕೂಡಲೇ ಕುರಿತು ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಟ್ವೀಟ್ ನಲ್ಲಿ ಪಕ್ಷೇತರ ಅಭ್ಯರ್ಥಿ ಯಾರಬ್, ಸಚಿವ ಮುನಿರತ್ನ ಜೊತೆಯಲ್ಲಿರುವ ಹಲವು ಫೋಟೋಗಳನ್ನು, ಪೋಸ್ಟರ್ ಗಳನ್ನು ಹಂಚಿಕೊಂಡು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಅಲ್ಲದೆ ಕಳೆದ ರಾತ್ರಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ, ಸೋಷಿಯಲ್ ಮೀಡಿಯಾದಲ್ಲಿ ಲೈವ್ ಬಂದು ಮುನಿರತ್ನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.