ಮದುವೆಗೆ ಹೊರಟಿದ್ದ ಬಸ್ ಅಪಘಾತ: ಮೂವರ ಸಾವು

237

ಪ್ರಜಾಸ್ತ್ರ ಸುದ್ದಿ

ತುಮಕೂರು: ಮದುವೆ ಸಮಾರಂಭಕ್ಕೆ ಹೊರಟ್ಟಿದ್ದ ಖಾಸಗಿ ಬಸ್ ವೊಂದು ಶಿರಾ ತಾಲೂಕಿನ ಮೆಕ್ಕೇರಹಳ್ಳಿ ಹತ್ತಿರ ಪಲ್ಟಿಯಾಗಿದೆ. ಇದ್ರಿಂದಾಗಿ ಮೂವರು ಸಾವನ್ನಪ್ಪಿದ್ದಾರೆ. ಭಾಗ್ಯಮ್ಮ, ಕಿಟ್ಟಪ್ಪ ಮೃತಪಟ್ಟವರಾಗಿದ್ದು, ಇನ್ನೊಬ್ಬರ ಕುರಿತು ಇನ್ನು ಸರಿಯಾದ ಮಾಹಿತಿ ದೊರೆತಿಲ್ಲ.

ಶೆಂಬೆನಹಳ್ಳಿ, ಗೊಳ್ಳರಹಟ್ಟಿ ಗ್ರಾಮದಿಂದ ಬುಕ್ಕಾಪಟ್ಟಣ ಗ್ರಾಮಕ್ಕೆ ಬಸ್ ಹೊರಟಿದ್ದಾಗ ಈ ಘಟನೆ ನಡೆದಿದೆ. ಮೃತ ದೇಹಗಳನ್ನ ಹಾಗೂ ಗಾಯಾಳುಗಳನ್ನ ಶಿರಾ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತಕ್ಕೆ ರಸ್ತೆ ಕಾಮಗಾರಿಯೇ ಕಾರಣವೆಂದು ಆರೋಪಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!