ಅರ್ಚನಾ ಕೊಲೆ ಕೇಸ್: ಪತಿ, ಮಗಳು ಸೇರಿ 7 ಜನರ ಬಂಧನ

796

ಪ್ರಜಾಸ್ತ್ರ ಅಪರಾಧ ಸುದ್ದಿ

ಬೆಂಗಳೂರು: ಕಳೆದ ಡಿಸೆಂಬರ್ 27ರಂದು ಹೊಸೂರು ಜಂಕ್ಷನ್ ಬಳಿ ಅರ್ಚನಾ ರೆಡ್ಡಿ ಅನ್ನೋ ಮಹಿಳೆಯ ಕೊಲೆಗೆ ಸಂಬಂಧಿಸಿದಂತೆ 2ನೇ ಪತಿ ಹಾಗೂ ಮಗಳು ಸೇರಿದಂತೆ 7 ಜನ ಆರೋಪಿಗಳನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ.

ಅರ್ಚನಾ ಕೊಲೆಯ ಮೂಲಕ ಆಸ್ತಿ ಕಬಳಿಸಿ ವಿಲಾಸಿ ಜೀವನ ನಡೆಸಬೇಕು ಅನ್ನೋ ಉದ್ದೇಶ ಹೊಂದಿದ್ದರು ಅನ್ನೋದು ತಿಳಿದು ಬಂದಿದೆ. ಮೊದಲ ಪತಿಯಿಂದ ಬೇರೆಯಾಗಿದ್ದ ಅರ್ಚನಾ ರೆಡ್ಡಿ ನವೀನ್ ಕುಮಾರ್ ನೊಂದಿಗೆ ಮದುವೆ ಮಾಡಿಕೊಂಡಿದ್ದರು. ಮುಂದೆ ಕೆಲವು ವರ್ಷಗಳ ನಂತರ ನವೀನ್ ಜೊತೆ ಮನಸ್ತಾಪವಾಗಿ ಬೇರೆಯಾಗಿದ್ದರು.

ಬೆಳೂಂದರಿನಲ್ಲಿ ವಾಸವಾಗಿದ್ದ ಅರ್ಚನಾ ಹಾಗೂ ನವೀನ್ ನಡುವೆ ಚೆನ್ನಪಟ್ಟಣದಲ್ಲಿ ಆಸ್ತಿ ವಿಚಾರವಾಗಿ ಜಿಗಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಎಲ್ಲ ಹಿನ್ನೆಲೆಯಲ್ಲಿ 2ನೇ ಪತಿ ನವೀನ್ ಕುಮಾರ್ ಹಾಗೂ ಮಗಳು 21 ಯುವಿಕಾ ರೆಡ್ಡಿ ಸೇರಿ ಅರ್ಚನಾ ಕೊಲೆಗೆ ಸಂಚು ರೂಪಿಸಿದ್ದರು. ಡಿಸೆಂಬರ್ 27ರಂದು ಜಿಗಣಿ ಪುರಸಭೆ ಚುನಾವಣೆಯ ಮತದಾನಕ್ಕೆ ಹೋಗಿದ್ದ ಅರ್ಚನಾ, ರಾತ್ರಿ ವಾಸಪ್ ಬರುವಾಗಿ ಹೊಸೂರು ಜಂಕ್ಷನ್ ಈ ಕೃತ್ಯವೆಸಗಿದ್ದರು. ಕಾರಿನಲ್ಲಿದ್ದ ಮಗ ಹಾಗೂ ಚಾಲಕ ಎಸ್ಕೇಪ್ ಆಗಿದ್ದರು. ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಅರ್ಚನಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.




Leave a Reply

Your email address will not be published. Required fields are marked *

error: Content is protected !!