ಪ್ರಜಾಸ್ತ್ರ ಸುದ್ದಿ
ನವದೆಹಲಿ: ಪ್ರತಿವರ್ಷ ಜನವರಿ 15ರಂದು ಸೇನಾ ದಿನಾಚರಣೆ ಆಚರಿಸಿಕೊಂಡು ಬರಲಾಗುತ್ತಿದೆ. ಮೂರು ಸೇನಾಪಡೆಗಳ ಮುಖ್ಯಸ್ಥರು ತಂತಮ್ಮ ಪ್ರಧಾನ ಕಚೇರಿಗಳಲ್ಲಿ ಗೌರವ ನಮನ ಸಲ್ಲಿಸಿದರು. ಅಲ್ದೇ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ಸಹ ಗೌರವ ನಮನ ಸಲ್ಲಿಸಿದರು.
ಸೇನಾ ದಿನಾಚರಣೆ ಕುರಿತು ಟ್ವೀಟ್ ಮಾಡಿರುವ ರಾಷ್ಟ್ರಪತಿ ರಾಮನಾಥ್ ಕೋವಿಂಡ್, ಗಡಿ ರಕ್ಷಣೆ ಹಾಗೂ ದೇಶದಲ್ಲಿ ಶಾಂತಿ ಕಾಪಾಡುವಲ್ಲಿ ಸೈನಿಕರ ಪಾತ್ರ ಬಹುದೊಡ್ಡದು. ನಿಮ್ಮ ತ್ಯಾಗ, ಶೌರ್ಯಕ್ಕೆ ಇಡೀ ದೇಶ ಋಣಿಯಾಗಿದೆ ಎಂದಿದ್ದಾರೆ.
ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ದೇಶಕ್ಕಾಗಿ ತ್ಯಾಗ, ಬಲಿದಾನೈಗ ವಿರೋಧ ಯೋಧರನ್ನು ಸ್ಮರಿಸಿಕೊಂಡರು. ಎಂಥಹ ಪರಿಸ್ಥಿತಿಯಲ್ಲಿ ನಮ್ಮ ಯೋಧರು ದೇಶವನ್ನು ಕಾಪಾಡುತ್ತಾರೆ. ಅವರಿಗೆ ಶುಭಾಶಯಗಳು ಎಂದರು.