ಪ್ರಜಾಸ್ತ್ರ ಅಪರಾಧ ಸುದ್ದಿ
ವಿಜಯಪುರ: ಜಿಲ್ಲೆಯ ಸಿಂದಗಿ ತಾಲೂಕಿನ ಪೊಲೀಸ್ ಠಾಣೆ ವ್ಯಾಪ್ತಿಯ 9 ಬೈಕ್ ಕಳ್ಳತನ ಪ್ರಕರಣ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ. ಗಬಸಾವಳಗಿ ಗ್ರಾಮದ ರಾಮು ಅಲಿಯಾಸ್ ರಾಮಚಂದ್ರ ಭೀಮಪ್ಪ ಪಾತ್ರೋಟ(23) ಹಾಗೂ ಅಪ್ರಾಪ್ತನೊಬ್ಬನನ್ನ ಬಂಧಿಸಲಾಗಿದೆ.
ಈ ಆರೋಪಿಗಳು ಕೇವಲ ಸಿಂದಗಿ ಠಾಣೆ ವ್ಯಾಪ್ತಿ ಮಾತ್ರವಲ್ಲದೆ, ದೇವರಹಿಪ್ಪರಗಿ, ಇಂಡಿ ಠಾಣೆ, ವಿಜಯಪುರ ಗ್ರಾಮೀಣ ಠಾಣೆ, ಗೋಳಗುಮ್ಮಟ ಠಾಣೆ ಸೇರಿದಂತೆ ಮಹಾರಾಷ್ಟ್ರದ ಸೋಲಾಪುರ, ರತ್ನಾಗಿರಿ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡಿದ್ದು, ಹಣಕಾಸಿನ ತೊಂದರೆಯಿಂದ ಹೀಗೆ ಮಾಡಿರುವುದಾಗಿ ಎಸ್ಪಿ ಅನುಪಮ ಅಗರವಾಲ್ ತಿಳಿಸಿದ್ದಾರೆ.
ಬೀಟ್ ಪೊಲೀಸರಾದ ಭಗವಂತರಾಯ ಮುಳಸಾವಳಗಿ, ರಾಜೇಶ ಕಟ್ಟಿಮನಿ ಹಾಗೂ ಸುರೇಶ ಕೊಂಡಿ ಗಸ್ತು ತಿರುಗುತ್ತಿರುವಾಗ ಅನುಮಾನಾಸ್ಪದವಾಗಿ ತುರುಗಾಡುತ್ತಿದ್ದ ಈ ಇಬ್ಬರನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆಗ ಇವರ ಕಳ್ಳತನದ ಪ್ರಕರಣಗಳು ಬೆಳಕಿಗೆ ಬಂದಿವೆ.
ಸಿಂದಗಿ ಠಾಣೆಯ 9, ಗೋಳಗುಮ್ಮಟ ಠಾಣೆ- 2, ದೇವರಹಿಪ್ಪರಗಿ ಠಾಣೆ- 1, ಇಂಡಿ ಗ್ರಾಮೀಣ ಠಾಣೆ- 1, ಎಪಿಎಂಸಿ-1, ವಿಜಯಪುರ ಠಾಣೆ- 1 ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ -1 ಹಾಗೂ ರತ್ನಾಗಿರಿ ಠಾಣೆಯಲ್ಲಿ- 1 ಹೀಗೆ 8.35 ಲಕ್ಷ ರೂಪಾಯಿ ಮೊತ್ತದ 19 ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ ಪಿ ಅನುಪಮ ಅಗರವಾಲ್ ತಿಳಿಸಿದ್ದಾರೆ. ಈ ವೇಳೆ ಎಎಸ್ ಪಿ ಡಾ.ರಾಮ ಅರಸಿದ್ದಿ, ಡಿವೈಎಸ್ ಪಿ ಶ್ರೀಧರ ದೊಡ್ಡಿ, ಸಿಂದಗಿ ಠಾಣೆ ಪಿಎಸ್ಐ ಸಂಗಮೇಶ ಹೊಸಮನಿ ಸೇರಿ ಇತರರು ಉಪಸ್ಥಿತಿಯಿದ್ದರು.