ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಸಚಿವ ಡಾ.ಕೆ ಸುಧಾಕರ ಅವರ, ನೈತಿಕತೆ ಹಾಗೂ ಏಕ ಪತ್ನಿ ವ್ರತಸ್ಥರಾ ಅನ್ನೋ ಪ್ರಶ್ನೆಗೆ ಸಂಬಂಧಿಸಿದಂತೆ ಒಬ್ಬೊಬ್ಬರೆ ಉತ್ತರ ಕೊಡ್ತಿದ್ದಾರೆ. ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿ ಈ ಬಗ್ಗೆ ಮಾತ್ನಾಡಿದ್ದು, ನಾನು ಜೀವನದಲ್ಲಿ ಒಮ್ಮೆ ತಪ್ಪು ಮಾಡಿದ್ದೇನೆ. ಅದನ್ನು ಒಪ್ಪಿಕೊಂಡಿದ್ದಾನೆ. ಇಲ್ಲಿ ಎಲ್ಲರ ಮನೆ ದೋಸೆ ತೂತೆ ಎಂದು ತಿರುಗೇಟು ನೀಡಿದ್ದಾರೆ.
ಸಚಿವರಾದವರಿಗೆ ಸಾಕಷ್ಟು ಜವಾಬ್ದಾರಿಯುತವಾದ ಕೆಲಸಗಳು ಇರುತ್ತವೆ. ಜನರ ಸಮಸ್ಯೆ ಕಡೆ ಗಮನ ಹರಿಸಬೇಕು. ಅದನ್ನು ಬಿಟ್ಟು ಇಂತಹ ಹೇಳಿಕೆ ನೀಡುವ ಮೊದ್ಲು ಯೋಚಿಸಬೇಕು. ನಾನು ಹಿಂದೆ ಮಾಡಿದ ತಪ್ಪನ್ನ ಸದನದಲ್ಲಿಯೂ ಒಪ್ಪಿಕೊಂಡಿದ್ದೇನೆ ಎಂದಿದ್ದಾರೆ.