ಅಂಗಡಿ ಮಾಲೀಕನಿಂದ ಬಾಲಕನಿಗೆ ಥಳಿತ: 6 ದಿನಗಳ ಬಾಲ ಸಾವು!

244

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಅಂಗಡಿಯಲ್ಲಿ ಹಣ ಕದ್ದಿದ್ದಾನೆ ಎಂದು ಹೇಳಿ ಬಾಲಕನೊಬ್ಬನಿಗೆ ಅಂಗಡಿ ಮಾಲೀಕ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಗರ ಉಪ್ಪಾರಸಿರಿಯಲ್ಲಿ ನಡೆದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಬಾಲಕ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ.

ಕಳೆದ 6 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಬಾಲಕ, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗ್ತಿದೆ. ಮಾರ್ಚ್ 16ರಂದು ಹಣ ಕಳ್ಳತನ ಮಾಡಿದ್ದಾನೆ ಅನ್ನೋ ಆರೋಪದಲ್ಲಿ ಅಂಗಡಿ ಮಾಲೀಕ ಹೊಡಿದ್ದಾನೆ ಎಂದು ಬಾಲಕ, ಆಸ್ಪತ್ರೆಯಲ್ಲಿದ್ದಾಗ ಹೇಳಿದ್ದ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!