ಪ್ರಜಾಸ್ತ್ರ ಸುದ್ದಿ
ಶೃಂಗೇರಿ: 15 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಪ್ರಕರಣ ಜನವರಿ 30, 2021ರಂದು ಬೆಳಕಿಗೆ ಬಂದ ಭಾರೀ ಸದ್ದು ಮಾಡಿತು. ಈ ಪ್ರಕರಣ ಸಂಬಂಧ ಈಗಾಗ್ಲೇ 32 ಜನರನ್ನ ಬಂಧಿಸಲಾಗಿದೆ. ಇದೀಗ ಸ್ಫೋಟಕ ತಿರುವು ಸಿಕ್ಕಿದೆ. ಹೆಚ್ಚುವರಿ ಎಸ್ಪಿ ಎಸ್.ಶ್ರುತಿ ನೇತೃತ್ವದ ತಂಡ ತನಿಖೆ ನಡೆಸ್ತಿದ್ದು, ಬಾಲಕಿ ಬದುಕಿನಲ್ಲಿ ತಾಯಿಯೇ ವಿಲನ್ ಅಂತೆ.
ಉತ್ತರ ಕರ್ನಾಟಕ ಮೂಲದ ಮಹಿಳೆ ಶೃಂಗೇರಿಗೆ ಬಂದು 2ನೇ ಮದುವೆ ಮಾಡಿಕೊಂಡಿದ್ದಳಂತೆ. ಮೊದಲ ಪತಿಯಿಂದ ಜನಿಸಿದ್ದ ಮಗಳನ್ನು ಅಕ್ಕನ ಮಗಳೆಂದು ಕರೆದುಕೊಂಡು ಬಂದಿದ್ದಾಳೆ. ಮುಂದೆ 2ನೇ ಗಂಡನಿಂದಲೂ ದೂರವಾದ್ದಳಂತೆ. ಹಣದ ಆಸೆಗೆ ಬಿದ್ದ ತಾಯಿಯೇ ಮಗಳನ್ನ ವೇಶ್ಯ ವೃತ್ತಿಗೆ ತಳ್ಳಿ ಅತ್ಯಾಚಾರ ನಡೆಯಲು ಕಾರಣವಾಗಿದ್ದಳು ಅನ್ನೋದು ತಿಳಿದು ಬಂದಿದೆ.
ಈ ಘಟನೆ ಸಂಬಂಧ ಬಾಲಕಿಯ ಚಿಕ್ಕಮ್ಮನೆಂದು ಹೇಳಿಕೊಂಡಿದ್ದ ಮಹಿಳೆಯನ್ನು ವಿಚಾರಣೆ ನಡೆಸಿದಾಗ, ಆಕೆಯೇ ಬಾಲಕಿಯ ನಿಜವಾದ ತಾಯಿ. ಇಷ್ಟಕ್ಕೆಲ್ಲ ಅವಳೆ ಕಾರಣವೆಂದು ಹೇಳಲಾಗ್ತಿದೆ.