ಪ್ರಜಾಸ್ತ್ರ ಸುದ್ದಿ
ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆಯ ಕಣ ಬಿರುಸಿನಿಂದ ಕೂಡಿದೆ. ಬಿಜೆಪಿ ಹಾಗೂ ಟಿಎಂಸಿ ನಡುವೆ ಜಿದ್ದಾಜಿದ್ದು ನಡೆದಿದೆ. ಪ್ರಧಾನಿ ಮೋದಿಯನ್ನು ಸುಳ್ಳುಗಾರ ಎಂದಿರುವ ಸಿಎಂ ಮಮತಾ ಬ್ಯಾನರ್ಜಿ, ಬಂಗಾಳಕ್ಕೆ ಗೂಂಡಾಗಳನ್ನು ಕಳಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ವಿಷ್ಣುಪುರದಲ್ಲಿ ಸಮಾವೇಶವನ್ನುದ್ದೇಶಿ ಮಾತ್ನಾಡಿದ ದೀದಿ, ನಾನು ಪ್ರಧಾನ ಮಂತ್ರಿ ಕುರ್ಚಿಯನ್ನ ತುಂಬಾ ಗೌರವಿಸುತ್ತೇನೆ. ಆದ್ರೆ, ಮೋದಿಯಂತ ಸುಳ್ಳುಗಾರರನ್ನ ನೋಡಿಲ್ಲ. ಕಳೆದೊಂದು ವರ್ಷದಿಂದ ರೈತರು ಹೋರಾಟ ಮಾಡುತ್ತಿದ್ದಾರೆ. ಅವರಿಗೆ ನಡೆಯದಂತೆ ಮೋದಿ, ಅಮಿತ ಶಾ, ಅದಾನಿ ಟೀಂ ಮಾಡಿದೆ ಎಂದು ಕಿಡಿ ಕಾರಿದ್ದಾರೆ.