ಸಚಿವ ಸುಧಾಕರ ಹೇಳಿಕೆಗೆ ಶಾಸಕಿಯರು ಗರಂ

270

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ರಾಜ್ಯದ ರಾಜಕೀಯದಲ್ಲಿ ಕೆಸರೆರಚಾಟ ನಡೆದಿದೆ. ಕಾಂಗ್ರೆಸ್ ನಾಯಕರ ನಡೆಯನ್ನ ಪ್ರಶ್ನಿಸುವ ಹಾಗೂ ಪ್ರಕರಣವನ್ನ ಸಮರ್ಥಿಸುವ ಭರದಲ್ಲಿ ಸಚಿವ ಸುಧಾಕರ, ರಾಜ್ಯದ 224 ಶಾಸಕರ ನೈತಿಕತೆ ಪ್ರಶ್ನಿಸಿದ್ದಾರೆ. ಎಲ್ಲರೂ ಏಕ ಪತ್ನಿ ವ್ರತಸ್ಥರಾ ಎಂದಿದ್ದಾರೆ.

ಸಚಿವ ಸುಧಾಕರ ಹೇಳಿಕೆಗೆ ಮಹಿಳಾ ಶಾಸಕಿಯರು ಗರಂ ಆಗಿದ್ದಾರೆ. ಸುಧಾಕರ ಹೇಳಿಕೆ ಅವರ ಮನಸ್ಥಿತಿ ತೋರಿಸುತ್ತದೆ. ತಪ್ಪನ್ನು ಸಮರ್ಥನೆ ಮಾಡಿಕೊಳ್ಳಲು ಹೋಗಿ ಮತ್ಯಾರನ್ನೋ ಎಳೆದು ತರುವುದು ಸರಿಯಲ್ಲ ಎಂದಿದ್ದಾರೆ.

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ರೂಪಕಲಾ, ಸೌಮ್ಯ ರೆಡ್ಡಿ, ಸಚಿವೆ ಶಶಿಕಲಾ ಜೊಲ್ಲೆ ಸೇರಿದಂತೆ ಶಾಸಕರು ಸಹ ಕಿಡಿ ಕಾರಿದ್ದಾರೆ. ಸದನಕ್ಕೆ ಅಗೌರವ ತೋರಿಸಿದ್ದಾರೆ ಅಂತಾ ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!