ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕೋವಿಡ್ ರೂಪಾಂತರ ತಳಿಯ ಬಗ್ಗೆ ಜನರಲ್ಲಿ ಇದೀಗ ಆತಂಕ ಶುರುವಾಗಿದೆ. ಇದರ ಜೊತೆಗೆ ಹಲವು ರೀತಿಯ ಸುದ್ದಿಗಳು ಎಲ್ಲೆಡೆ ಹರಡುತ್ತಿವೆ. ಅದರಲ್ಲಿ ಲಾಕ್ ಡೌನ್ ಸಹ ಆಗಿದೆ. ಈ ಬಗ್ಗೆ ಮಾತನಾಡಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಲಾಕ್ ಡೌನ್ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.
ಕೆಲ ಮಾಧ್ಯಮಗಳಲ್ಲಿ ಈಗಾಗ್ಲೇ ಲಾಕ್ ಡೌನ್ ಬಗ್ಗೆ ಸುದ್ದಿ ಬರುತ್ತಿದ್ದು ಜನರಲ್ಲಿ ಗೊಂದಲ ಮೂಡಿದೆ. ಸಧ್ಯ ಸರ್ಕಾರದ ಎದುರು ಲಾಕ್ ಡೌನ್ ತೀರ್ಮಾನವಿಲ್ಲ. ಸರ್ಕಾರ ಲಾಕ್ ಡೌನ್ ಬಗ್ಗೆ ಹೇಳಿದರೆ ಮಾತ್ರ ನಂಬಬೇಕು ಎಂದು ಸಚಿವರು ಹೇಳಿದ್ದಾರೆ. ಈ ಮೂಲಕ ಲಾಕ್ ಡೌನ್ ಆಗುತ್ತೆ ಅನ್ನೋ ಚರ್ಚೆಗೆ ತೆರೆ ಎಳೆದಿದ್ದಾರೆ.