ಮೆಕ್ಕೆಜೋಳ ಬೆಳೆದ ರೈತರು, ಆಶಾ ಕಾರ್ಯಕರ್ತೆಯರಿಗೆ ಸಿಎಂ ಗಿಫ್ಟ್

398

ಬೆಂಗಳೂರು: ಕರೋನಾ ಲಾಕ್ ಡೌನ್ ನಿಂದಾಗಿ ಕಂಗಾಲಾಗಿರುವ ಜನರಿಗೆ ರಾಜ್ಯ ಸರ್ಕಾರ ಒಂದಿಷ್ಟು ಸಹಾಯ ಮಾಡ್ತಿದೆ. ಇದೀಗ ಮೆಕ್ಕೆಜೋಳ ಬೆಳೆದ ರೈತರು ಹಾಗೂ ಆಶಾ ಕಾರ್ಯಕರ್ತೆಯರಿಗೆ ಸಿಎಂ ವಿಶೇಷ ಬಹುಮಾನ ನೀಡಿದ್ದಾರೆ.

ಮೆಕ್ಕೆಜೋಳ ಬೆಳೆದ ರಾಜ್ಯದ ಸುಮಾರು 10 ಲಕ್ಷ ರೈತರಿಗೆ ತಲಾ 5 ಸಾವಿರ ರೂಪಾಯಿ ಘೋಷಿಸಲಾಗಿದ್ದು, ಇದಕ್ಕಾಗಿ 500 ರೂಪಾಯಿ ಎತ್ತಿಡಲಾಗಿದೆಯಂತೆ. ಇನ್ನು 42 ಸಾವಿರದ 500 ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂಪಾಯಿ ನೀಡಲಾಗುತ್ತೆ ಎಂದಿದ್ದಾರೆ. ಇದಕ್ಕೆ 12 ಕೋಟಿ ಎತ್ತಿಡಲಾಗ್ತಿದೆ. ಇದನ್ನ ಸಹಕಾರ ಸಂಘಗಳಿಂದ ಕ್ರೂಢಿಕರಿಸಿ ಸಹಕಾರ ಇಲಾಖೆಯಿಂದ ನೀಡಲಾಗುವುದು ಎಂದಿದ್ದಾರೆ.

ಇಂದು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಬಿ.ಎಸ್ ಯಡಿಯೂರಪ್ಪ ಈ ವಿಚಾರಗಳನ್ನ ಘೋಷಿಸಿದ್ದಾರೆ. ಇನ್ನು ಪ್ರಕೃತಿ ವಿಕೋಪದಿಂದ ಮೇಕೆ, ಕುರಿ ಸಾವನ್ನಪ್ಪಿದ್ದಲ್ಲಿ 5 ಸಾವಿರ ರೂಪಾಯಿ ಪರಿಹಾರ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!