ಪ್ರಜಾಸ್ತ್ರ ಸುದ್ದಿ
ಮೈಸೂರು: ರಾಮನಗರವನ್ನು ಬೆಂಗಳೂರಿಗೆ ಸೇರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ ಶಿವಕುಮಾರ್, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ನಡುವೆ ವಾಕ್ಸಮರ ನಡೆದಿದೆ. ಈ ಕುರಿತು ಬುಧವಾರ ಪ್ರತಿಕ್ರಿಯೆ ನೀಡಿದ ಡಿ.ಕೆ ಶಿವಕುಮಾರ್, ರಾಮನಗರದ ಇತಿಹಾಸದ ಬಗ್ಗೆ ಕುಮಾರಸ್ವಾಮಿ ಅವರ ತಂದೆಗೆ ಕೇಳಿ ತಿಳಿದುಕೊಳ್ಳಿ ಎಂದರು.
ವಿದ್ಯೆ ಇಲ್ಲದಿದ್ದರೂ ಪ್ರಜ್ಞಾವಂತಿಕೆ, ಸಾಮಾನ್ಯ ಜ್ಞಾನವಿರಬೇಕು. ಕೆಂಪೇಗೌಡರು, ಶಿವಕುಮಾರ ಸ್ವಾಮೀಜಿ, ಆದಿಚುಂಚನಗಿರಿ ಸ್ವಾಮೀಜಿ ಜನಿಸಿದ್ದು ರಾಮನಗರದಲ್ಲಿ. ನಾವೆಲ್ಲ ಬೆಂಗಳೂರಿನವರು. ರಾಮನಗರ ಮಾಡಿದ್ದ ಕ್ರೆಡಿಟ್ ಕುಮಾರಸ್ವಾಮಿಯೇ ಇಟ್ಟುಕೊಳ್ಳಲಿ. ಅವರ ಹೇಳಿಕೆಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ಹಾಗೂ ನಮ್ಮ ಸರ್ಕಾರ ಏನು ಮಾಡುತ್ತದೆ ಅದು ಮುಖ್ಯ ಎಂದು ತಿರುಗೇಟು ನೀಡಿದರು.
ಇನ್ನೊಬ್ಬ ತಲೆಕೆಟ್ಟ ಬಿಜೆಪಿ ಎಂಎಲ್ಸಿ ಏನೇನೂ ಮಾತನಾಡುತ್ತಿದ್ದಾನೆ. ಯಾಕೆ ಅಷ್ಟೊಂದು ಆತುರ ಎಂದು ಸಿ.ಪಿ ಯೋಗೇಶ್ವರ್ ಹೆಸರು ಹೇಳದೆ ಕಿಡಿ ಕಾರಿದರು.