ಪ್ರಜಾಸ್ತ್ರ ಸುದ್ದಿ
ದಾವಣಗೆರೆ: ಕೇಂದ್ರದ ಬಜೆಟ್ ಬಗ್ಗೆ ಮಾತನಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ, ಇದು ಜನರನ್ನು ಮರಳು ಮಾಡುವ ಬಜೆಟ್. ಇದರಿಂದ ರಾಜ್ಯದಲ್ಲಿ ಮುಂದಿನ ಬರುವ ಸರ್ಕಾರ ಜನರು ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.
ಬಜೆಟ್ ಈಗ ಮಂಡಿಸಿದರೂ ಹಣ ಬಿಡುಗಡೆ ಏಪ್ರಿಲ್ ನಲ್ಲಿ ಆಗುತ್ತದೆ. ರಾಜ್ಯ ಚುನಾವಣೆ ಕೇಂದ್ರಿತ ಬಜೆಟ್ ಇದಾಗಿದೆ. ಆದರೆ, ಎಲ್ಲ ಯೋಜನೆಗಳು ಜಾರಿ ಆಗಬೇಕಲ್ಲ. ಭದ್ರಾ, ಮಹದಾಯಿ, ಕೃಷ್ಣ ಏನೇ ಘೋಷಣೆ ಮಾಡಿದರೂ ಮೊದಲೇ ಮಾಡಬೇಕಿತ್ತು. ಹೀಗಾಗಿ ಇದು ಘೋಷಣೆಯಾಗಿಯೇ ಉಳಿಯುತ್ತೆ ಎಂದು ವ್ಯಂಗ್ಯವಾಡಿದರು.