ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಬೆಂಗಳೂರು: ರಾಮನಗರದಲ್ಲಿ ರಚ್ಚು ಐ ಲವ್ ಯೂ ಚಿತ್ರದ ಶೂಟಿಂಗ್ ವೇಳೆ ಸಹ ಫೈಟರ್ ಸಾವನ್ನಪ್ಪಿದ್ದ ಪ್ರಕರಣ ಸಂಬಂಧ ನಟ ಅಜಯ್ ರಾವ್ ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗಿದೆ.
ರಾಮನಗರದ 3ನೇ ಅಪರ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ನಟ ಅಜಯ್ ಹಾಗೂ ನಿರ್ಮಾಪಕ ಗುರು ದೇಶಪಾಂಡೆಗೆ ನಿರೀಕ್ಷಣಾ ಮಂಜೂರು ಮಾಡಲಾಗಿದೆ. ಇನ್ನು ನಿರ್ದೇಶಕ ಶಂಕರಯ್ಯ, ಕ್ರೇನ್ ಆಪರೇಟರ್ ಮಾಹದೇವ್ ಹಾಗೂ ಸಹಾಸ ನಿರ್ದೇಶಕ ವಿನೋದ್ ಕುಮಾರ್ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.