ಡಾ.ವಿಷ್ಣು ಕಾರು ಡ್ರೈವರ್ ಆಗಲು ಮುಂದಾಗಿದ್ಯಾಕೆ? ಭಾರತಿ ಹೇಳಿದ ಕಣ್ಣೀರ ಕಥೆ

243

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಟಿ ಭಾರತಿ ವಿಷ್ಣುವರ್ಧನ್ ಅವರ ಜೀವನಗಾಥೆಯ ‘ಬಾಳೆ ಬಂಗಾರ’ ಸಾಕ್ಷ್ಯ ಚಿತ್ರ ರೆಡಿಯಾಗಿದ್ದು, ಅದರ ಟ್ರೇಲರ್ ರಿಲೀಸ್ ಮಾಡಲಾಗಿದೆ. ಅಳಿಯ, ನಟ ಅನಿರುದ್ಧ್ ಈ ಸಾಕ್ಷ್ಯ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ಮಗಳು ಕೀರ್ತಿ ನಿರ್ಮಾಣ ಮಾಡಿದ್ದಾರೆ. ಕೆಲವೇ ದಿನಗಳಲ್ಲಿ ಓಟಿಟಿನಲ್ಲಿ ಪ್ರಿಮಿಯರ್ ಆಗಲಿದೆ.

ಈ ವೇಳೆ ಯಾರಿಗೂ ಗೊತ್ತಿಲ್ಲದ ಹಲವು ಕಹಿ ಘಟನೆಗಳು ಈ ಸಾಕ್ಷ್ಯಚಿತ್ರದಲ್ಲಿವೆ. ಹಲವು ಹಿಟ್ ಚಿತ್ರಗಳನ್ನ ನೀಡಿದ ಸ್ಟಾರ್ ನಟಿ, ನೂರಾರು ಚಿತ್ರಗಳಲ್ಲಿ ನಟಿಸಿದ ಸ್ಟಾರ್ ನಟಿ ದಂಪತಿ 6 ತಿಂಗಳ ಕಾಲ ಗಂಜಿ ಕುಡಿದುಕೊಂಡು ಜೀವನ ಮಾಡಿದ್ದಾರಂತೆ.

ನಟ ವಿಷ್ಣುವರ್ಧನ್ ಅವರಿಗೆ ಯಾವುದೇ ಚಿತ್ರದಲ್ಲಿ ಅವಕಾಶವಿಲ್ಲದೆ ಹೋಗಿ 6 ತಿಂಗಳ ಕಾಲ ಕೆಲಸವಿಲ್ಲದೆ ಖಾಲಿಯಿದ್ರಂತೆ. ಆಗ ಅವರ ಬೆಂಜ್ ಕಾರಿನ್ನ ಟ್ರಾವಲ್ಸ್ ಗೆ ಬಿಟ್ಟು ಅದರ ಡ್ರೈವರ್ ಆಗಿ ಕೆಲಸ ಮಾಡಲು ಮುಂದಾಗಿದ್ರಂತೆ. ಅದಕ್ಕೆ ಭಾರತಿ ಅವರು ಸಹ ಆಯ್ತು ಎಂದಿದ್ರಂತೆ. ಅದೃಷ್ಟಕ್ಕೆ ಮರುದಿನ ಹೊಂಬಿಸಿಲು ಚಿತ್ರದ ಆಫರ್ ಬಂತು ಎಂದು ಹೇಳಿದ್ದಾರೆ. ಹೀಗೆ ಹಲವು ರೋಚಕ ಸತ್ಯ ಘಟನೆಗಳು ಈ ಸಾಕ್ಷ್ಯಚಿತ್ರದಲ್ಲಿವೆ.

ನಾಗತಿಹಳ್ಳಿ ಚಂದ್ರಶೇಖರ್, ಶ್ರುತಿ, ಸುಧಾರಾಣಿ, ಅನಿರುದ್ಧ್, ಕೀರ್ತಿ, ಭಾರತಿ ವಿಷ್ಣುವರ್ಧನ್ ಸೇರಿ ಅನೇಕರು ಈ ವೇಳೆ ಮಾತ್ನಾಡಿದರು.




Leave a Reply

Your email address will not be published. Required fields are marked *

error: Content is protected !!