ಪ್ರಜಾಸ್ತ್ರ ಅಪರಾಧ ಸುದ್ದಿ
ಚಿಕ್ಕಮಗಳೂರು: ತರಿಕೇರಿ ಪಟ್ಟಣದಲ್ಲಿ ಸೋಮವಾರ ಖಾಸಗಿ ಆಸ್ಪತ್ರೆಯ ವೈದ್ಯನ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ ಪ್ರಕರಣ ಸಂಬಂಧ ನಾಲ್ವರನ್ನ ಬಂಧಿಸಲಾಗಿದೆ. ಚಂದ್ರಶೇಖರ, ನಿತಿನ, ವೆಂಕಟೇಶ ಹಾಗೂ ವೇಣು ಬಂಧಿತ ಆರೋಪಿಗಳು.
ಮೇ 29ರಂದು ಅಜ್ಜಂಪುರ ತಾಲೂಕಿನ ತಡಸ ಗ್ರಾಮದ 9 ವರ್ಷದ ಭುವನ ಅನ್ನೋ ಬಾಲಕ ಮೃತಪಟ್ಟಿದ್ದ. ಮಗುವಿನ ಸಾವಿನ ಪ್ರತೀಕಾರಕ್ಕಾಗಿ ಕೊಲೆಗೆ ಸಂಚು ರೂಪಿಸಿದ್ರು ಅನ್ನೋದು ತಿಳಿದು ಬಂದಿದೆ. ಸೋಮವಾರ ಮಧ್ಯಾಹ್ನ ಆಸ್ಪತ್ರೆಯಿಂದ ಮನೆಗೆ ಹೊರಟಿದ್ದ ಡಾ.ದೀಪಕ ಎಂಬುವರ ಮೇಲೆ ಮಚ್ಚಿನಿಂದ ಗಂಭೀರವಾಗಿ ಹಲ್ಲೆ ಮಾಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.