ಪ್ರಜಾಸ್ತ್ರ ಸುದ್ದಿ
ವಿಜಯಪುರ: ನಗರದ ಮುಕುಂದ ನಗರದಲ್ಲಿ ಹಾಡಹಗಲೇ ಬಾಲಕಿಯೊಬ್ಬಳನ್ನು ಅಪಹರಣಕ್ಕೆ ಯತ್ನಿಸಿದ ಘಟನೆ ನಡೆದಿದೆ.
ಸೌಂದರ್ಯ ಬಿರಾದಾರ (8) ಅನ್ನೋ ಬಾಲಕಿಯ ಕಿಡ್ನ್ಯಾಪ್ಗೆ ಯತ್ನಿಸಲಾಗಿದೆ. ರಸ್ತೆಯಲ್ಲಿ ಹೋಗುವಾಗ ಅಪರಿಚಿತ ವ್ಯಕ್ತಿಯಿಂದ ಕಿಡ್ನ್ಯಾಪ್ಗೆ ಯತ್ನಿಸಲಾಗಿದ್ದು, ಬಾಲಕಿ ಕಿರುಚಾಟ ಹಾಗೂ ಸ್ಥಳದಲ್ಲಿದ್ದ ಜನರಿಂದ ಭಯಭೀತರಾಗಿ ಓಡಿ ಹೋದ ದೃಶ್ಯ ಸಿಸಿಟಿವಿಯೊಂದರಲ್ಲಿ ರೆಕಾರ್ಡ್ ಆಗಿದೆ. ಗೋಳಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.