ಅತ್ತಿಬೆಲೆ ಪ್ರಕರಣ, ಮೃತರ ಸಂಖ್ಯೆ 16ಕ್ಕೆ ಏರಿಕೆ

241

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಅತ್ತಿಬೆಲೆ ಹತ್ತಿರ ಅಕ್ರಮವಾಗಿ ನಡೆಸುತ್ತಿದ್ದ ಪಟಾಕಿ ಗೋದಾಮಿನಲ್ಲಿ ಕಳೆದ ಶನಿವಾರ ಬೆಂಕಿ ಅನಾಹುತ ಸಂಭವಿಸಿ ಬರೋಬ್ಬರಿ 12 ಜನರು ಮೃತಪಟ್ಟಿದ್ದರು. ನಂತರ ಅದು 14ಕ್ಕೆ ಏರಿಕೆಯಾಗಿ ಇದೀಗ ಸಾವಿನ ಸಂಖ್ಯೆ 16 ಆಗಿದೆ.

ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೆಂಕಟೇಶ್ ಇಂದು ಮೃತಪಟ್ಟಿದ್ದಾನೆ. ಸ್ನೇಹಿತನೊಂದಿಗೆ ಪಟಾಕಿ ತರಲು ಬಂದಿದ್ದ. ಈ ವೇಳೆ ನಡೆದ ಸ್ಫೋಟದಿಂದಾಗಿ ಸ್ನೇಹಿತ ಹಾಗೂ ವೆಂಕಟೇಶ್ ತೀವ್ರ ಗಾಯಗೊಂಡಿದ್ದರು. ಗುರುವಾರ ವೆಂಕಟೇಶ್ ಮೃತಪಟ್ಟಿದ್ದಾನೆ.

ಈ ಪ್ರಕರಣದಲ್ಲಿ ಮೃತಪಟ್ಟ ಕುಟುಂಬಗಳಿಗೆ ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರದಿಂದ ಪರಿಹಾರ ಘೋಷಿಸಲಾಗಿದೆ. ರಾಜ್ಯ ಸರ್ಕಾರ ತನಿಖೆಯನ್ನು ಸಿಐಡಿಗೆ ವಹಿಸಿದೆ. ಘಟನೆ ಸಂಬಂಧ ಗೋದಾಮಿನ ಮಾಲೀಕ ಹಾಗೂ ಆತನ ಮಗನನ್ನು ಈಗಾಗ್ಲೇ ಬಂಧಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!