ಪ್ರಜಾಸ್ತ್ರ ಸುದ್ದಿ
ನವದೆಹಲಿ: ಗರ್ಭಿಣಿ ಆನೆ ಹತ್ಯೆ ರಾಷ್ಟ್ರವ್ಯಾಪಿ ಭಾರಿ ಚರ್ಚೆಯಾಗ್ತಿದ್ದಂತೆ ಇದೀಗ ಮತ್ತೊಂದು ಭಯಾನಕ ಅಂಶ ಹೊರ ಬಂದಿದೆ. ಕೇರಳದಲ್ಲಿ ಪ್ರತಿ ವರ್ಷ 600 ಆನೆಗಳನ್ನ ಹತ್ಯೆ ಮಾಡಲಾಗುತ್ತೆ ಎಂದು ಕೇಂದ್ರ ಮಾಜಿ ಸಚಿವೆ, ಬಿಜೆಪಿ ನಾಯಕಿ ಮನೇಕಾ ಗಾಂಧಿ ಹೇಳಿದ್ದಾರೆ.
ಕೇರಳ ಅರಣ್ಯ ಇಲಾಖೆ ಜೊತೆ ಆಗಾಗ ಚರ್ಚಿಸುತ್ತೇನೆ. ಅಲ್ದೇ, ಕೇರಳದ ದೇವಲಾಯವೊಂದರಲ್ಲಿ ಆನೆ ಕಾಲುಗಳನ್ನ ನಾಲ್ಕೂ ದಿಕ್ಕುಗಳಿಂದ ಕಟ್ಟಿ ಹಿಂಸಿಸಲಾಗುತ್ತೆ. ಈ ಬಗ್ಗೆ ದೂರು ನೀಡಿ ತಿಂಗಳಾಗಿದೆ. ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಹೇಳಿದ್ದಾರೆ.
ದಂತಕ್ಕಾಗಿ ವರ್ಷಕ್ಕೆ ಸರಾಸರಿ 600 ಆನೆಗಳನ್ನ ಹತ್ಯೆ ಮಾಡಲಾಗ್ತಿದೆ ಎಂದು ಆರೋಪಿಸಿದ್ದಾರೆ. ಆದ್ರೂ, ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದಿದ್ದಾರೆ.