ಅಭಿಮಾನಿಗಳ ಕನಸು ನನಸು ಮಾಡುತ್ತೇವೆ

313

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಅಂತೂ ಇಂತೂ ಆರ್ ಸಿಬಿ ಟೀಂ ಪ್ಲೇ ಆಫ್ ಹಂತಕ್ಕೆ ತಲುಪಿದೆ. ಹೀಗಾಗಿ ಅಭಿಮಾನಿಗಳಲ್ಲಿ ಇನ್ನು ಆಸೆ ಜೀವಂತವಾಗಿದೆ. ಇದರ ನಡುವೆ ಎಬಿಡಿ ಫ್ಯಾನ್ಸ್ ಗಳ ಕನಸನ್ನ ಈ ಬಾರಿ ನನಸು ಮಾಡುತ್ತೇವೆ ಎಂದು ಹೇಳಿದ್ದಾರೆ.

ಮುಂದಿನ ಎರಡು ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ರೆ ಮಾತ್ರ ಆರ್ ಸಿಬಿ ಫೈನಲ್ ತಲುಪಲಿದೆ. ಹೀಗಾಗಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ. ಈ ಬಗ್ಗೆ ಮಾತ್ನಾಡಿರುವ ಸ್ಫೋಟಕ ಬ್ಯಾಟ್ಸಮನ್ ಎಬಿಡಿ, ಮುಂದಿನ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿ ಕಪ್ ಜಯಿಸುತ್ತೇವೆ ಎಂದು ಹೇಳಿದ್ದಾರೆ.

ಆರ್ ಸಿಬಿ ಅಭಿಮಾನಿಗಳು ಎಲ್ಲೆಡೆ ಆಟವಾನ್ನು ನೋಡುತ್ತಿದ್ದಾರೆ. ಅವರ ಮುಖದ ಮೇಲೆ ಸಂತಸ ಮೂಡಿಸುವುದು ನಮ್ಮ ಜವಾಬ್ದಾರಿ. ಹೀಗಾಗಿ ಈ ಬಾರಿ ಕಪ್ ಗೆಲ್ಲುತ್ತೇವೆ ಎಂದು ಎಬಿಡಿ ಆತ್ಮವಿಶ್ವಾಸದಿಂದ ನುಡಿದಿದ್ದಾರೆ. ಡೆಲ್ಲಿ ವಿರುದ್ಧ ಸೋತಿದ್ರಿಂದ ಎಲಿಮಿನೇಟರ್ ಹಾಗೂ ಕ್ವಾಲಿಫಯರ್ ಪಂದ್ಯ ಗೆದ್ದು ಫೈನಲ್ ಗೆ ತಲುಪಬೇಕಿದೆ.




Leave a Reply

Your email address will not be published. Required fields are marked *

error: Content is protected !!