ಪ್ರಜಾಸ್ತ್ರ ಸುದ್ದಿ
ರಾಯಚೂರು: ಮಕ್ಕಳು ಬೇಕು ಎಂದು ಅನೇಕರು ಕಂಡ ಕಂಡ ದೇವರನ್ನ ಬೇಡಿಕೊಳ್ತಾರೆ. ಹತ್ತು ಹಲವು ಡಾಕ್ಟರ್ ಬಳಿ ತೋರಿಸ್ತಾರೆ. ಆದ್ರೆ, ಅವರಿಗೆ ಮಕ್ಕಳು ಆಗುವುದಿಲ್ಲ. ಆದ್ರೆ, ಇಲ್ಲೊಬ್ಳು ಹೆಣ್ಣು ಕೂಸು ಅನ್ನೋ ಕಾರಣಕ್ಕೆ ಜಮೀನಿನಲ್ಲಿ ಎಸೆದು ಹೋಗಿರುವ ಘಟನೆ ನಡೆದಿದೆ.
ರಾಯಚೂರು ಜಿಲ್ಲೆ ಲಿಂಗಸೂರು ತಾಲೂಕಿನ ಬೆಂಡೋನಿ ಅನ್ನೋ ಗ್ರಾಮದಲ್ಲಿ ಒಂದು ದಿನದ ಹಿಂದೆಯಷ್ಟೇ ಜನಿಸಿದ ಹೆಣ್ಣು ಕೂಸನ್ನ ಎಸೆದು ಹೋಗಿದ್ದಾಳೆ. ಮಗು ಅಳುವುದು ಕೇಳಿದ ದಾರಿಹೋಕರು ಗಮನಿಸಿದ್ದಾರೆ. ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ. ಅವರಿಂದ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿದೆ.
ಅಸ್ವಸ್ಥಗೊಂಡ ಮಗುವನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತಾನೊಂದು ಹೆಣ್ಣಾಗಿ ತನ್ಗೊಂದು ಹೆಣ್ಣು ಜನಿಸಿತು ಅನ್ನೋ ಕಾರಣಕ್ಕೆ ನಿರ್ದಯವಾಗಿ ಎಸೆದು ಹೋಗಿರುವ ಮಹಿಳೆಯನ್ನ ಪತ್ತೆ ಹಚ್ಚಲಾಗ್ತಿದೆ.