ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕರೋನಾ ಹೆಸರಿನಲ್ಲಿ ಸರ್ಕಾರ ಸಾರ್ವಜನಿಕರಿಂದ ಹಗಲು ದರೋಡೆ ಮಾಡ್ತಿದೆ. ಮಾಸ್ಕ್ ಧರಿಸಿಲ್ಲವೆಂದು ದಂಡ, ಸಾಮಾಜಿಕ ಅಂತರ ಕಾಪಾಡಿಲ್ಲವೆಂದು ದಂಡ, ಕೋವಿಡ್ ನಿಯಮ ಪಾಲಿಸುತ್ತಿಲ್ಲವೆಂದು ದಂಡ. ಈಗ ಸ್ಯಾನ್ ಟೈಸರ್ ಹೆಸರಿನಲ್ಲಿ ದರೋಡೆ ಮಾಡುತ್ತಿದೆ.
ಯೆಸ್, ರೈಲುಗಳಲ್ಲಿ ಪ್ರಯಾಣ ಮಾಡುವವರ ಬ್ಯಾಗ್ ಗಳಿಗೆ ಸ್ಯಾನ್ ಟೈಸಿಂಗ್ ಮಾಡಲಾಗುತ್ತಿದೆಯಂತೆ. ಅದಕ್ಕೆ 10 ರೂಪಾಯಿ ಪಡೆಯಲಾಗುತ್ತಿದೆ ಅನ್ನೋ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಯಶವಂತಪುರ ಜಂಕ್ಷನ್ ನಲ್ಲಿ ನೀಡಿದ 10 ರೂಪಾಯಿ ಬೆಲೆಯ ರಸೀದಿ ನೋಡಿದ ಜನರು ಕಿಡಿ ಕಾರುತ್ತಿದ್ದಾರೆ.
ಪೆಟ್ರೋಲ್ ದರದಲ್ಲಿ 14 ಪೈಸೆ ಇಳಿಕೆಯಾಗಿರುವುದನ್ನ ಗಂಟಲು ಅರಚಿಕೊಂಡು ಹೇಳುವ ಜನರು, ಸ್ಯಾನ್ ಟೈಸರ್ ಸಿಂಪಡಣೆ ಹೆಸರಲ್ಲಿ 10 ರೂಪಾಯಿ ವಸೂಲಿ ಮಾಡ್ತಿರುವ ಬಗ್ಗೆ ಮಾತ್ನಾಡಬೇಕಿದೆ. ಸರ್ಕಾರದ ಈ ನಡೆಯನ್ನ ವಿಪಕ್ಷಗಳು ಪ್ರಶ್ನಿಸುವ ಮೂಲಕ ಸಾರ್ವಜನಿಕರ ಜೀವನದ ಮೇಲೆ ಬರೆ ಎಳೆಯುತ್ತಿರುವ ಸರ್ಕಾರವನ್ನ ಕಟ್ಟಿ ಹಾಕಬೇಕಿದೆ.