ಆಕಸ್ಮಿಕ ಬೆಂಕಿಗೆ ಗುಡಿಸಲು ಭಸ್ಮ

236

ಪ್ರಜಾಸ್ತ್ರ ಸುದ್ದಿ

ಮುದ್ದೇಬಿಹಾಳ: ತಾಲೂಕಿನ ನಾಗಬೇನಾಳ ಗ್ರಾಮದ ಬಳಿಯ ತೋಟದಲ್ಲಿನ ಗುಡಿಸಲೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಸುಟ್ಟು ಬೂದಿಯಾಗಿದೆ. ಖೇಮಪ್ಪ ಲಮಾಣಿ ಎಂಬುವರ ಗುಡಿಸಲು ಸುಟ್ಟು ಬೂದಿಯಾಗಿದೆ.

ಗುಡಿಸಲಿನಲ್ಲಿದ್ದ ಸುಮಾರು 5 ಲಕ್ಷ ರೂಪಾಯಿ, 50 ಗ್ರಾಂ ಚಿನ್ನಾಭರಣ, ದವಸ ಧಾನ್ಯ, ದಿನಬಳಕೆ ವಸ್ತುಗಳು ಸುಟ್ಟು ಕರಕಲಾಗಿವೆ. ಕಣ್ಣೆದುರಲ್ಲೇ ಗುಡಿಸಲು ಸುಟ್ಟು ಹೋಗ್ತಿರುವುದನ್ನು ನೋಡಿದ ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿತ್ತು. ಈ ಬಗ್ಗೆ ಮುದ್ದೇಬಿಹಾಳ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!