ಪ್ರಜಾಸ್ತ್ರ ಸುದ್ದಿ
ಮುದ್ದೇಬಿಹಾಳ: ತಾಲೂಕಿನ ನಾಗಬೇನಾಳ ಗ್ರಾಮದ ಬಳಿಯ ತೋಟದಲ್ಲಿನ ಗುಡಿಸಲೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಸುಟ್ಟು ಬೂದಿಯಾಗಿದೆ. ಖೇಮಪ್ಪ ಲಮಾಣಿ ಎಂಬುವರ ಗುಡಿಸಲು ಸುಟ್ಟು ಬೂದಿಯಾಗಿದೆ.
ಗುಡಿಸಲಿನಲ್ಲಿದ್ದ ಸುಮಾರು 5 ಲಕ್ಷ ರೂಪಾಯಿ, 50 ಗ್ರಾಂ ಚಿನ್ನಾಭರಣ, ದವಸ ಧಾನ್ಯ, ದಿನಬಳಕೆ ವಸ್ತುಗಳು ಸುಟ್ಟು ಕರಕಲಾಗಿವೆ. ಕಣ್ಣೆದುರಲ್ಲೇ ಗುಡಿಸಲು ಸುಟ್ಟು ಹೋಗ್ತಿರುವುದನ್ನು ನೋಡಿದ ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿತ್ತು. ಈ ಬಗ್ಗೆ ಮುದ್ದೇಬಿಹಾಳ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.