ಪ್ರಜಾಸ್ತ್ರ ಅಪರಾಧ ಸುದ್ದಿ
ಮುದ್ದೇಬಿಹಾಳ: ಕಳೆದ ನವೆಂಬರ್ 30ರ ತಡರಾತ್ರಿ ತಾಲೂಕಿನ ಹಿರೇಮುರಾಳ ಗ್ರಾಮದಲ್ಲಿನ ದೇವಸ್ಥಾನದಲ್ಲಿ ಕಳ್ಳತನ ನಡೆದಿತ್ತು. ಗ್ರಾಮದೇವಿಯಾದ ದ್ಯಾಮವ್ವನ ಕೊರಳಲ್ಲಿನ ಸುಮಾರು 1 ಲಕ್ಷ 80 ಸಾವಿರ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ಓರ್ವನನ್ನು ಬಂಧಿಸಲಾಗಿದೆ.
ಕಳ್ಳತನದಲ್ಲಿ ಇಬ್ಬರು ತೊಡಗಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ. ಅದೇ ಗ್ರಾಮದ ಇಬ್ಬರಿಂದ ಕಳ್ಳತನ ಕೃತ್ಯ ನಡೆದಿರುವುದು ತಿಳಿದು ಬಂದಿದೆ. ಶಬ್ಬೀರ್ ಲಾಲಸಾಬ್ ಸುರುಪೂರ ಬಂಧಿತ ಆರೋಪಿಯಾಗಿದ್ದಾನೆ. ಬೈಲಪ್ಪ ಭೀಮಪ್ಪ ಚಲವಾದಿ ಎಂಬಾತ ತಲೆ ಮರೆಸಿಕೊಂಡಿದ್ದಾನೆ.
ಕಳ್ಳತನ ಕುರಿತು ಸುರೇಶ ಬಡಿಗೇರ ಪ್ರಕರಣ ದಾಖಲಿಸಿದ್ದರು. ವಿಜಯಪುರ ಪೋಲಿಸ್ ಅಧಿಕ್ಷಕರಾದ ಖುಷಿಕೇಶ್ ಸೋನಾವನೆ, ಬಾಗೇವಾಡಿ ಡಿವೈಎಸ್ಪಿ ಜೆ.ಎಂ ಕರುಣಾಕರಶೆಟ್ಟಿ ಮಾರ್ಗದರ್ಶನದಲ್ಲಿ ಸಿಪಿಐ ಮಲ್ಲಿಕಾರ್ಜುನ್ ತುಳಸಿಗೇರಿ, ಪಿಎಸ್ಐ ಸಂಜೀವ ತಿಪ್ಪರಡ್ಡಿ, ಕ್ರೈಂ ಪಿಎಸೈ ಆರ್.ಎಲ್ ಮನ್ನಾಬಾಯಿ ಹಾಗೂ ಸಿಬ್ಬಂದಿ ಪ್ರಕರಣ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಇವರಿಗೆ ಎಸ್ಪಿ ನಗದು ಬಹುಮಾನ ಘೋಷಿಸಿದ್ದಾರೆ.