ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಬೆಲ್ ಬಾಟಂ ಸಿನಿಮಾದ ಸಕ್ಸಸ್ ಬಳಿಕ ನಿರ್ದೇಶಕ ಜಯತೀರ್ಥ ಅವರ ಮೇಲಿನ ಜವಾಬ್ದಾರಿ ಇನ್ನೂ ಹೆಚ್ಚಾಗಿದೆ. ಹೀಗಾಗಿ ಸಿನಿ ಪ್ರೇಕ್ಷಕರು ಅವರ ಮುಂದಿನ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅವರ ನಿರೀಕ್ಷೆಯನ್ನ ಹುಸಿ ಮಾಡದಂತೆ ‘ಬನಾರಸ್’ ಮೇಲೆ ನಿರ್ದೇಶಕರು ಭರ್ಜರಿ ಕೆಲಸ ಮಾಡ್ತಿದ್ದಾರೆ.
ಈಗಾಗ್ಲೇ ಅರ್ಧ ಶೂಟಿಂಗ್ ಮುಗಿಸಿರುವ ಬನಾರಸ್ ಟೀಂ, ಇದೀಗ ಹಾಡುಗಳ ಶೂಟಿಂಗ್ ನಡೆಸಿದೆ. ಝೇಯ್ಡ್ ಖಾನ್ ಹಾಗೂ ಸೋನಲ್ ಮೊಂತೆರೋ ಜೋಡಿ ಕಮಾಲ್ ಮಾಡಲು ರೆಡಿಯಾಗಿದೆ. ‘ಬೆಳಕಿನ ಕವಿತೆ’ ಸಾಲುಗಳಿಂದ ಶುರುವಾಗುವ ರೊಮ್ಯಾಂಟಿಕ್ ಹಾಡಿನ ಶೂಟಿಂಗ್ ಕಂಪ್ಲೀಟ್ ಆಗಿದೆ.
ಭಾರತೀಯ ಸಂಸ್ಕೃತಿ, ಜನಪದ ಶೈಲಿ, ವಿದೇಶಿ ಶೈಲಿಯನ್ನ ಹೋಲುವ 8 ಸೆಟ್ ಗಳನ್ನ ನಿರ್ಮಿಸಿ ಈ ಹಾಡಿನ ಶೂಟಿಂಗ್ ಮಾಡಲಾಗಿದೆ. ಆರ್ಟ್ ಡೈರೆಕ್ಟರ್ ಅರುಣ ಸಾಗರ ಇದಕ್ಕೆ ಕೆಲಸ ಮಾಡಿದ್ದಾರೆ. ನಿರ್ದೇಶಕ, ಕೊರಿಯೋಗ್ರಾಫರ್ ಎ.ಹರ್ಷಾ ನೃತ್ಯ ಸಂಯೋಜನೆ ಮಾಡಿದ್ದಾರೆ. ವಿ.ನಾಗೇಂದ್ರ ಪ್ರಸಾದ ಅವರ ಸಾಹಿತ್ಯ ಇದೆ. ಅಜನೀಶ ಲೋಕನಾಥ ಸಂಗೀತ, ಅದ್ವೈತ ಗುರುಮೂರ್ತಿ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಬನಾರಸ್ ಕಣ್ತುಂಬಿಕೊಳ್ಳಲು ಚಿತ್ರ ರಸಿಕರು ಎದುರು ನೋಡ್ತಿದ್ದಾರೆ.