ಬಸವಕಲ್ಯಾಣ ಉಪ ಚುನಾವಣೆ: ಜೆಡಿಎಸ್ ಅಭ್ಯರ್ಥಿ ಘೋಷಣೆ

346

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದ 1 ಲೋಕಸಭೆ ಹಾಗೂ 2 ವಿಧಾನಸಭೆಯ ಉಪ ಚುನಾವಣೆ ದಿನಾಂಕ ಘೋಷಣೆ ಮಾಡಲಾಗಿದೆ. ಇದರಲ್ಲಿ ಬಸವಕಲ್ಯಾಣ ವಿಧಾನಸಭೆಯ ಉಪ ಚುನಾವಣೆಗೆ ಜೆಡಿಎಸ್ ತನ್ನ ಅಭ್ಯರ್ಥಿಯನ್ನ ಘೋಷಿಸಿದೆ. ಈ ಬಗ್ಗೆ ಮಾತ್ನಾಡಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಸಯ್ಯದ ಯಸ್ರಬ್ ಅಲಿ ಖಾದ್ರಿ ಸ್ಪರ್ಧಿಸಲಿದ್ದಾರೆ. ಮಸ್ಕಿ ಹಾಗೂ ಬೆಳಗಾವಿಯ ಬಗ್ಗೆ ಎನ್ನೆರಡು ದಿನಗಳಲ್ಲಿ ತಿಳಿಸಲಾಗುವುದು ಎಂದಿದ್ದಾರೆ.

ಇನ್ನು ಸಿಡಿ ಪ್ರಕರಣದ ಬಗ್ಗೆ ಮಾತ್ನಾಡಿ, ಸಿಡಿ ಹಿಂದಿನ ಮಹಾನಾಯಕ ಯಾರು ಗೊತ್ತಿಲ್ಲ. ಅದನ್ನು ಎಸ್ಐಟಿ ಅಧಿಕಾರಿಗಳು ತಿಳಿಸಬೇಕು. ಬಲ್ಲ ಮೂಲಗಳಿಂದ ನನಗೂ ಕೆಲವರ ಮಾಹಿತಿ ಇದೆ. ಸಮಯ ಬಂದಾಗ ಆ ಬಗ್ಗೆ ಹೇಳುತ್ತೇನೆ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!