ವಿಜಯಪುರದಲ್ಲಿ ಭಿಕ್ಷುಕನ ಹತ್ಯೆ

296

ಪ್ರಜಾಸ್ತ್ರ ಅಪರಾಧ ಸುದ್ದಿ

ವಿಜಯಪುರ: ಯಾರೋ ಕ್ರೂರಿಗಳು ಬಸ್ ನಿಲ್ದಾಣದಲ್ಲಿ ಮಲಗಿದ್ದ ಭಿಕ್ಷುಕನನ್ನ ಹತ್ಯೆಗೈದಿದ್ದಾರೆ. ನಗರದ ವಿಶ್ವೇಶ್ವರ ಕಾಲೋನಿಯ ಸಿಟಿ‌ ಬಸ್ ನಿಲ್ದಾಣದಲ್ಲಿ ಈ ನೀಚ ಕೃತ್ಯ ನಡೆದಿದೆ.

ಕಳೆದ ಮೂರ್ನಾಲ್ಕು ತಿಂಗಳಿಂದ ಬಸ್ ನಿಲ್ದಾಣದಲ್ಲೇ ಭಿಕ್ಷುಕ ವಾಸಿಸುತ್ತಿದ್ದ. ಆತನ ಹಿನ್ನೆಲೆ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಘಟನಾ ಸ್ಥಳಕ್ಕೆ ಆದರ್ಶನಗರ ಪಿಎಸ್ಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯಾವ ಕಾರಣಕ್ಕೆ ಅನ್ಯಾಯವಾಗಿ ಭಿಕ್ಷುಕನನ್ನ ಕೊಲೆ ಮಾಡಲಾಗಿದೆ ಅನ್ನೋ ಪ್ರಶ್ನೆ ಮೂಡಿದೆ. ಈ ಕುರಿತು ಆದರ್ಶ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!