ಬ್ರೇಕಿಂಗ್ ನ್ಯೂಸ್:
ಬೆಳಗಾವಿ: ಸಿಎಂ ಬಿ.ಎಸ್ ಯಡಿಯೂರಪ್ಪನವರು ನಿನ್ನೆಯಿಂದ ಮೂರು ದಿನಗಳ ಕಾಲ ಪ್ರವಾಹ ಪೀಡಿತ ಪ್ರದೇಶಗಳ ಪ್ರವಾಸ ನಡೆಸಿದ್ದಾರೆ. ಇಂದು ಬೆಳಗ್ಗೆ ಬೆಳಗಾವಿ ಜಿಲ್ಲೆಯ ಅತಿಥಿ ಗೃಹದಲ್ಲಿ ಅಹವಾಲು ಸ್ವೀಕರಿಸಿ ಹೊರಡ್ತಿದ್ದ ವೇಳೆ ರೈತರು ಪ್ರತಿಭಟನೆ ನಡಸಿದ್ರು.
ಬೆಳೆಗೆ ಪರಿಹಾರ ನೀಡುವಂತೆ ಒತ್ತಾಯಿಸಿ ರೈತರು ಪ್ರತಿಭಟನೆ ಮಾಡಿದ್ರು. ಇದ್ರಿಂದಾಗಿ ಅಹವಾಲು ಸ್ವೀಕರಿಸುವುದನ್ನ ಅರ್ಧಕ್ಕೆ ಮೊಟಕುಗೊಳಿಸ ಹೊರಡಲು ಮುಂದಾದ್ರು. ಇದನ್ನ ನೋಡಿದ ರೈತರು ಅವರ ಕಾರಿಗೆ ಘೇರಾವ್ ಹಾಕಿ ಮುತ್ತಿಗೆ ಹಾಕಲು ನೋಡಿದ್ರು. ಈ ವೇಳೆ ರೈತ ಮುಖಂಡರನ್ನ, ಕೆಲ ರೈತರನ್ನ ಬಂಧಿಸಿ ಸಿಎಂ ಕಾರು ಹೋಗುವಂತೆ ಪೊಲೀಸರು ಅನುಕೂಲ ಮಾಡಿದ್ರು.