ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಇಬ್ಬರ ಗುರುತು ಪತ್ತೆಯಾಗಿದ್ದು, ಸ್ಥಳೀಯರೆಂದು ತಿಳಿದು ಬಂದಿದೆ. ಆದ್ರೆ, ಇದರಲ್ಲಿ ಸುಮಾರು 40 ವರ್ಷದ ವ್ಯಕ್ತಿಯೊಬ್ಬನ ಗುರುತು ಇದುವರೆಗೂ ಪತ್ತೆಯಾಗಿಲ್ಲ.
ಹೀಗೆ ಪತ್ತೆಯಾಗದ ಮೂರನೇ ವ್ಯಕ್ತಿ ಸ್ಥಳೀಯನಲ್ಲವೆಂದು ಪೊಲೀಸ್ರಿಗೆ ಅನುಮಾನ ಮೂಡಿದೆ. ಹೀಗಾಗಿ ಈ ಗಲಭೆಗೂ ಇತನಿಗೂ ಏನು ಸಂಬಂಧ? ಎಲ್ಲಿಂದ ಬಂದಿದ್ದ? ಯಾರು ಅನ್ನೋ ಪ್ರಶ್ನೆ ಮೂಡಿದೆ. ಒಂದು ದಿನ ಕಳೆದ್ರೂ ಗುರುತು ಪತ್ತೆಯಾಗದಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿದೆ.