‘ಭಾರತ ರತ್ನ’ ಪ್ರಶಸ್ತಿ ಸೇರಿ ಎಲ್ಲವೂ ನನ್ನ ಪಾದಕ್ಕೆ ಸಮ ಎಂದ ಬಿಲ್ಡಪ್ ಬಾಲಯ್ಯ

275

ಪ್ರಜಾಸ್ತ್ರ ಸಿನಿಮಾ

ಟಾಲಿವುಡ್ ಸಿನಿ ರಂಗದ ದಿಗ್ಗಜ, ರಾಜಕಾರಣಿ ಎನ್.ಟಿ ರಾಮರಾವ್ ಅವರ ಮಗ ನಟ ನಂದಮುರಿ ಬಾಲಕೃಷ್ಟ ವಿವಾದಾತ್ಮಕ ಹೇಳಿಕೆ ನೀಡಿದ್ದು, ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ. ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಬಾಲಯ್ಯ, ದೇಶದ ಅತ್ಯುನ್ನತ ಪ್ರಶಸ್ತಿ ಸೇರಿದಂತೆ ಆಸ್ಕರ್ ಪ್ರಶಸ್ತಿ ಬಗ್ಗೆಯೂ ಕೆಟ್ಟದಾಗಿ ಮಾತ್ನಾಡಿದ್ದಾರೆ.

ಆಸ್ಕರ್ ಪ್ರಶಸ್ತಿ ಪಡೆದ ಎ.ಆರ್ ರೆಹಮಾನ್ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಎ.ಆರ್ ರೆಹಮಾನ್ ಯಾರೆಂದು ನನ್ಗೆ ಗೊತ್ತಿಲ್ಲ. ಭಾರತ ರತ್ನ ಪ್ರಶಸ್ತಿ ನನ್ನ ತಂದೆಯ ಕಾಲಿನ ಬೆರಳಿಗೆ ಸಮ. ಆಸ್ಕರ್ ಅವರ ಕಾಲಿನ ಧೂಳಿಗೆ ಸಮ. ನಾನು ಪ್ರಶಸ್ತಿಗಳನ್ನು ಗೌರವಿಸುವುದಿಲ್ಲ. ಎಲ್ಲವೂ ನನ್ನ ಪಾದಕ್ಕೆ ಸಮ ಎಂದು ಹೇಳುವ ಮೂಲಕ, ದೇಶದ ಅತ್ಯುನ್ನತ ಪ್ರಶಸ್ತಿ ಬಗ್ಗೆ ತುಂಬಾ ಕೆಟ್ಟದಾಗಿ ಮಾತ್ನಾಡಿದ್ದಾರೆ.

1993ರಲ್ಲಿ ಬಾಲಕೃಷ್ಣ ನಟನೆಯ ನಿಪ್ಪು ರುವ್ವಾ ಚಿತ್ರಕ್ಕೆ ಹಿನ್ನಲೆ ಸಂಗೀತ ನೀಡಿದ್ದೇ ಎ.ಆರ್ ರೆಹಮಾನ್. ಈಗ ಅವರ ಬಗ್ಗೆ ಏನೋ ಹೇಳಲು ಹೋಗಿ, ಮಹಾನ್ ಸಾಧಕರು ಪಡೆದಿರುವ ದೇಶದ ಅತಿ ಶ್ರೇಷ್ಠವಾದ ಭಾರತ ರತ್ನ ಪ್ರಶಸ್ತಿ ಬಗ್ಗೆ ಅತ್ಯಂತ ಕೆಟ್ಟದಾಗಿ ಮಾತ್ನಾಡಿದ್ದಾರೆ. ಬಿಲ್ಡಪ್ ಬಾಲಯ್ಯ ಎಂದೇ ಗುರುತಿಸಿಕೊಂಡಿರುವ ನಂದಮುರಿ ಬಾಲಕೃಷ್ಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!