ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಆಂಧ್ರ, ತಮಿಳುನಾಡಿನಲ್ಲಿ ರಾಜಕೀಯ, ಸಿನಿಮಾ ಬೆರೆತು ದಶಕಗಳೇ ಕಳೆದಿವೆ. ಹೀಗಾಗಿ ಸಿನಿಮಾದವರು ರಾಜಕೀಯಕ್ಕೆ ಬಂದು ಶಾಸಕರು, ಸಚಿವರು, ಮುಖ್ಯಮಂತ್ರಿಗಳು ಆಗಿದ್ದಾರೆ. ಹೀಗಾಗಿ ಇಲ್ಲಿ ಎರಡೂ ಕಡೆ ರಾಜಕೀಯ ನಡೆಯುತ್ತೆ. ಆಂಧ್ರದಲ್ಲಿ ಜಗನ್ ಸರ್ಕಾರ ಸಿನಿಮಾದವರ ಮೇಲೆ ಮೊದಲಿನಿಂದಲೂ ಕಡಿವಾಣ ಹಾಕಲು ನೋಡುತ್ತಿದ್ದು, ಇದೀಗ ಇಬ್ಬರು ಸ್ಟಾರ್ ನಟರ ಚಿತ್ರಗಳಿಗೆ ಅಡ್ಡಿಯಾಗಿದೆ.
ನಂದಮೂರಿ ಬಾಲಕೃಷ್ಣ ನಟಿಸಿರುವ ವೀರ ಸಿಂಹ ರೆಡ್ಡಿ ಸಿನಿಮಾ ಜನವರಿ 12ರಂದು ರಿಲೀಸ್ ಆಗುತ್ತಿದೆ. ಅದಕ್ಕೂ ಮೊದಲು ಆಂಧ್ರದ ಒಂಗೋಲು ಪಟ್ಟಣದ ಎಬಿಎಂ ಮೈದಾನದಲ್ಲಿ ಪ್ರಿ ರಿಲೀಸ್ ಇವೆಂಟ್ ನಡೆಸಲು ಪ್ಲಾನ್ ಮಾಡಿದ್ದು, ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಆದರೆ, ಇದೀಗ ಇವೆಂಟ್ ಗೆ ಪೊಲೀಸರು ಪರವಾನಿಗೆ ನಿರಾಕರಿಸಿದ್ದಾರೆ.
ಶಾಂತಿ ಭಂಗ, ಟ್ರಾಫಿಕ್ ಸಮಸ್ಯೆಯ ನೆಪ ಹೇಳಿ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದೆ. ಊರ ಹೊರಗಿನ ದೂರದ ಪ್ರದೇಶದಲ್ಲಿ ಕಾರ್ಯಕ್ರಮ ಮಾಡಿ ಎಂದು ಜಾಗ ಸೂಚಿಸಿದೆ ಅಂತಾ ಸಿನಿಮಾ ತಂಡ ಹೇಳಿದೆ. ಇದೆ ರೀತಿ ಮೆಗಾ ಸೂಪರ್ ಸ್ಟಾರ್ ಚಿರಂಜೀವಿ ಅವರ ಚಿತ್ರಕ್ಕೂ ಅಡ್ಡಗಾಲು ಹಾಕಿದೆ.
ಕೇಂದ್ರದ ಮಾಜಿ ಸಚಿವ, ನಟ ಚಿರಂಜೀವಿ ನಟನೆಯ ವಾಲ್ತೇರು ವೀರಯ್ಯ ಚಿತ್ರದ ಪ್ರಿ ರಿಲೀಸ್ ಇವೆಂಟ್ ಜನವರಿ 8ರಂದು ವೈಜಾಗ್ ಪಟ್ಟಣದಲ್ಲಿ ನಡೆಸಲು ಮುಂದಾಗಿದೆ. ಆದರೆ, ಅಧಿಕಾರಿಗಳು ಕಾರ್ಯಕ್ರಮದ ಜಾಗ ಬದಲಿಸುವಂತೆ ಸಮಸ್ಯೆ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಭಾರೀ ಪ್ರಮಾಣದಲ್ಲಿ ಟಿಕೆಟ್ ದರ ಇಳಿಕೆ, ಫ್ಯಾನ್ಸ್ ಶೋ, ಬೆನಿಫಿಟ್ ಶೋಗಳನ್ನು ರದ್ದು ಮಾಡಿದ ಸರ್ಕಾರ ಇದೀಗ ಪ್ರಿ ರಿಲೀಸ್ ಇವೆಂಟ್ ಗೂ ಅಡ್ಡಿಯಾಗುತ್ತಿದೆ.