ಪ್ರಜಾಸ್ತ್ರ ಸುದ್ದಿ
ನವದೆಹಲಿ: ಜೂನ್ 29ರಂದು ತಿಹಾರ್ ಜೈಲಿನಲ್ಲೊಂದು ಕೊಲೆ ನಡೆದಿದೆ. 28 ವರ್ಷದ ಮೆಹತಾಬ್ ಕೊಲೆಯಾದ ವ್ಯಕ್ತಿಯಾಗಿದ್ದು, 22 ವರ್ಷದ ಜಾಕಿರ್ ಕೊಲೆ ಮಾಡಿದ ಯುವಕನಾಗಿದ್ದಾನೆ.
ಜೂನ್ 29ರ ಬೆಳಗ್ಗೆ ಎಲ್ಲ ಖೈದಿಗಳು ಪ್ರಾರ್ಥನೆಗೆ ಹೋದ ಟೈಂನಲ್ಲಿ, ಮೆಹತಾಬ್ ಗೆ ಕೋಣೆಗೆ ಹೋದ ಜಾಕಿರ್ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ ಎಂದು ಹೇಳಲಾಗ್ತಿದೆ. ಇದಕ್ಕಾ ಕಾರಣ, 6 ವರ್ಷಗಳ ಹಿಂದೆ ನಡೆದ ಸಹೋದರಿಯ ದಾರುಣ ಅಂತ್ಯ.
ಹೌದು, 2014ರಲ್ಲಿ ಅಂಬೇಡ್ಕರ್ ನಗರ ವ್ಯಾಪ್ತಿಯಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರವಾಗುತ್ತೆ. ಘಟನೆ ಬಳಿಕ ಪೋಕ್ಸೋ ಕಾಯ್ದೆಯಡಿಯಲ್ಲಿ ಮೆಹತಾಬ್ ನನ್ನ ಬಂಧಿಸಲಾಗುತ್ತೆ. ಆ ಬಾಲಕಿ ಈ ಜಾಕಿರನ ಸಹೋದರಿ. ಆಗ ಅವನಿಗೇ 16 ವರ್ಷ ಎಂದರೆ, ಸಹೋದರಿ ಎಷ್ಟೊಂದು ಚಿಕ್ಕವಳು ಇರಬಹುದು. ಅತ್ಯಾಚಾರದಿಂದಾಗಿ ಅಪ್ರಾಪ್ತೆ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಹೀಗಾಗಿ ಜಾಕಿರ್ ಸೇಡು ಇಟ್ಟುಕೊಳ್ಳುತ್ತಾನೆ. ಅದನ್ನ ತೀರಿಸಿಕೊಳ್ಳಲು ಕಾಯುತ್ತಿದ್ದ.
ಇದರ ನಡುವೆ 2018ರಲ್ಲಿ ಕೊಲೆ ಕೇಸಿನಲ್ಲಿ ಜಾಕಿರ್ ಜೈಲು ಸೇರುತ್ತಾನೆ. ಆಗ ಆತನ ವಯಸ್ಸು 20ಕ್ಕಿಂತ ಕಡಿಮೆ ಇರುವುದ್ರಿಂದ ಬೇರೆ ಕಡೆ ಹಾಕಿರ್ತಾರೆ. ಅಲ್ಲಿ ಮೆಹತಾಬ್ ಇರುವುದಿಲ್ಲ. ಮುಂದೆ 21 ವರ್ಷ ವಯಸ್ಸು ಆದ್ಮೇಲೆ ಸಾಮಾನ್ಯ ಖೈದಿ ಜೈಲಿಗೆ ಹಾಕಲಾಗುತ್ತೆ. ಆದ್ರೆ, ಅಲ್ಲಿ ಮೆಹತಾಬ್ ಇರುವುದಿಲ್ಲ. ಹೀಗಾಗಿ ಸ್ನೇಹಿತರೊಂದಿಗೆ ಜಗಳವಾಡಿದಂತೆ ಮಾಡಿ, ಮೆಹತಾಬ್ ಇರುವ ಕಡೆ ಬಂದಿದ್ದ.
ಹೀಗೆ ಬಂದ ಜಾಕಿರ್, ಮೆಹತಾಬನ ಸದಾ ಗಮನಿಸುತ್ತಾ ಬಂದಿದ್ದಾನೆ. ಪ್ರತಿಕಾರ ತೀರಿಸಿಕೊಳ್ಳಲು ಅವಕಾಶಕ್ಕೆ ಕಾಯಿದಿದ್ದಾನೆ. ಜೂನ್ 29ರಂದು ಅದು ಕೂಡಿ ಬಂದಿದೆ. ಅಂದು ಬೆಳಗ್ಗೆ ಅವನ ಕೋಣೆಗೆ ಹೋಗಿ ಹತ್ಯೆ ಮಾಡಿದ್ದಾನೆ. ಬಳಿಕ ಪೊಲೀಸರ ಎದುರು, ತನ್ನ ಸಾವಿನ ಪ್ರತೀಕಾರಕ್ಕೆ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ಮೂಲಕ ಜಾಕಿರ್ ತನ್ನ ಸೇಡು ತೀರಿಸಿಕೊಂಡಿದ್ದಾನೆ.