ಭೀಮಾನದಿಯಲ್ಲಿ ಕೊಚ್ಚಿಹೋಗಿದ್ದ ಬಾಲಕರ ಶವ ಪತ್ತೆ

389

ಪ್ರಜಾಸ್ತ್ರ ಸುದ್ದಿ

ಯಾದಗಿರಿ: ಜಿಲ್ಲೆಯ ವಡೇಗರ ತಾಲೂಕಿನ ಗುರಸಣಗಿ ಬಳಿ ಹಾದು ಹೋಗಿರುವ ಭೀಮಾನದಿಯಲ್ಲಿ ಭಾನುವಾರ ಈಜಲು ಹೋಗಿ ನೀರು ಪಾಲಾಗಿದ್ದ ನಾಲ್ವರು ಬಾಲಕರ ಶವ ಇಂದು ಪತ್ತೆಯಾಗಿವೆ. ಎನ್ ಡಿ ಆರ್ ಎಫ್, ಅಗ್ನಿಶಾಮಕ ಸಿಬ್ಬಂದಿ ಹಾಗೂ ಮೀನುಗಾರರ ತಂಡ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಶವಗಳು ಇಂದು ಪತ್ತೆಯಾಗಿವೆ.

ಅಯಾನ(16), ರೆಹಮಾನ(16), ಅಮಾನ(16) ಹಾಗೂ ರೆಹಮಾನ(15) ಈ ನಾಲ್ವರು ಬಾಲಕರು ಈಜಲು ಹೋಗಿ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ರು. ಬೋಟ್ ಗಳ ಮೂಲಕ ಶೋಧ ಕಾರ್ಯ ನಡೆಸಲಾಗಿದ್ದು, ಇಂದು ಶವಗಳು ಪತ್ತೆಯಾಗಿವೆ. ಮೃತ ಬಾಲಕರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಡಿಸಿ ಡಾ.ರಾಗಪ್ರಿಯಾ, ಎಸ್ಪಿ ಋಷಿಕೇಶ ಸೋನವಣೆ, ಎಸಿ ಶಂಕರಗೌಡ ಸೋಮನಾಳ ಅವರ ಮಾರ್ಗದರ್ಶನದಲ್ಲಿ ಶೋಧ ಕಾರ್ಯಚರಣೆ ನಡೆಸಲಾಗಿದೆ.




Leave a Reply

Your email address will not be published. Required fields are marked *

error: Content is protected !!