ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯದ ಹಲವು ಕಡೆ ಶನಿವಾರ ಲಘು ಭೂಕಂಪನವಾಗಿದೆ. ಎಲ್ಲೆಲ್ಲಿ ಭೂಕಂಪನ ಸಂಭವಿಸಿದೆ ಅನ್ನೋದರ ಮಾಹಿತಿ ಇಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ವಿವಿಧ ಕಡೆ ಭೂಕಂಪನವಾಗಿದೆ. ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 2.7ರಷ್ಟು ತೋರಿಸಿದೆ.
ಕೊಡಗು ಗಡಿಭಾಗದಲ್ಲಿ ಭೂಮಿ ಕಂಪಿಸಿದೆ. ಮಡಿಕೇರಿ, ವಿಜಯಪುರದಲ್ಲೂ ಭೂಕಂಪನವಾಗಿದೆ. ಅಲ್ದೇ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದಲ್ಲಿಯೂ ಭೂಮಿ ಕಂಪಿಸಿದೆ. ಹೀಗಾಗಿ ಇಡೀ ರಾಜ್ಯದಲ್ಲಿ ಒಂದು ರೀತಿ ಆತಂಕ ಮೂಡಿದೆ. ಯಾವ ಸಮಯದಲ್ಲಿ ಎಲ್ಲಿ ಏನಾಗುತ್ತೆ ಅನ್ನೋ ಭಯ ಜನರಲ್ಲಿ ಆವರಿಸಿಕೊಂಡಿದೆ.