ಪ್ರಜಾಸ್ತ್ರ ಸುದ್ದಿ
ನವದೆಹಲಿ: ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಬೆಂಬಲ ನೀಡುವುದಾಗಿ ಬಿಎಸ್ಪಿ ನಾಯಕಿ ಮಾಯಾವತಿ ತಿಳಿಸಿದ್ದಾರೆ. ಪ್ರತಿಪಕ್ಷಗಳನ್ನು ತಮ್ಮನ್ನು ಸಂಪರ್ಕಿಸಲ್ಲವೆಂದು ಮಾಯಾವತಿ ಹೇಳಿದ್ದಾರಂತೆ.
ಒಂದು ಕಾಲದಲ್ಲಿಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿದ್ದ ಮಾಯಾವತಿಯ ಬಿಎಸ್ಪಿ ಪಕ್ಷ ಈಗ ತವರು ರಾಜ್ಯದಲ್ಲಿ ಓರ್ವ ಶಾಸಕರನ್ನು ಹೊಂದಿದೆ. ಲೋಕಸಭೆಯಲ್ಲಿ 10, ರಾಜ್ಯಸಭೆಯಲ್ಲಿ 3 ಸಂಸದರನ್ನು ಬಿಎಸ್ಪಿ ಹೊಂದಿದೆ.