ರಾಷ್ಟ್ರಪತಿ ಅವರಿಂದ ರಾಮ ಮಂದಿರ ಉದ್ಘಾಟಿಸಬೇಕು

112

ಪ್ರಜಾಸ್ತ್ರ ಸುದ್ದಿ

ಮುಂಬೈ: ಮಹಾರಾಷ್ಟ್ರ ಮಾಜಿ ಸಿಎಂ, ಶಿವಸೇನೆ(ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಶನಿವಾರ ಹೇಳಿದ್ದಾರೆ. ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ದೇಶದ ಹೆಮ್ಮೆಯ ವಿಷಯ. ಹೀಗಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಮ ಮಂದಿರ ಉದ್ಘಾಟಿಸಬೇಕು ಎಂದು ಆಗ್ರಹಿಸಿದ್ದಾರೆ.

ಒಂದು ವೇಳೆ ರಾಷ್ಟ್ರಪತಿ ಅವರಿಂದ ರಾಮ ಮಂದಿರ ಉದ್ಘಾಟನೆ ಮಾಡಿಸದಿದ್ದರೆ, ಅಂದು (ಜನವರಿ 22ರಂದು) ನಾಸಿಕ್ ನ ಕಲಾರಾಮ್ ದೇವಸ್ಥಾನಕ್ಕೆ ರಾಷ್ಟ್ರಪತಿಯವರನ್ನು ಆಹ್ವಾನಿಸಿದ್ದೇವೆ. ಐತಿಹಾಸಿಕ ದೇವಸ್ಥಾನಕ್ಕೆ ಪಕ್ಷದ ಮುಖಂಡರೊಂದಿಗೆ ಭೇಟಿ ನೀಡುತ್ತೇವೆ. ಗೋದಾವರಿ ನದಿ ದಡದಲ್ಲಿ ಮಹಾ ಆರತಿ ಮಾಡುವುದಾಗಿ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!