ಪ್ರಜಾಸ್ತ್ರ ಸುದ್ದಿ
ರತ್ನಗಿರಿ: ಸಂವಿಧಾನ ಬದಲಿಸುವ ಸಲುವಾಗಿ ಬಿಜೆಪಿ 400 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಗುರಿ ಹೊಂದಿದೆ ಎಂದು ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ ಕಿಡಿ ಕಾರಿದರು. ಜಿಲ್ಲೆಯ ಗುಹಾಗಢದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದರು.
ವಾಜಪೇಯಿ, ಅಡ್ವಾನಿ ಕಾಲಕ್ಕಿಂತ ಈಗಿನ ಬಿಜೆಪಿ ಭಿನ್ನವಾಗಿದೆ. 100ಕ್ಕೂ ಹೆಚ್ಚು ಸಂಸದರನ್ನು ಅಮಾನತುಗೊಳಿಸಲಾಯಿತು. ಚರ್ಚೆಯಿಲ್ಲದೆ ಹಲವು ಮಸೂಸದೆಗಳ ಅಂಗೀಕಾರವಾಯಿತು. ಇನ್ನು ಒಂದು ದೇಶ ಒಂದು ಚುನಾವಣೆ ಸರ್ವಾಧಿಕಾರಿ ಪರಿಕಲ್ಪನೆ ಎಂದು ವಾಗ್ದಾಳಿ ನಡೆಸಿದರು.