ಜಾಸ್ತ್ರ ಸುದ್ದಿ
ವಿಜಯಪುರ: ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮೂವರು ಬೈಕ್ ಸವಾರರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಹೂವಿನ ಹಿಪ್ಪರಗಿ ಬಳಿಯ ದಿಂಡವಾರ ರಸ್ತೆಯಲ್ಲಿ ನಡೆದಿದೆ.
ಕುಮಾರ ಬಾಲಗುಂದಿ, ಬಸವರಾಜ ಹಂದ್ರಾಳ, ಸಾಬಣ್ಣ ಸಿದ್ದಾಪೂರ ಮೃತ ಬೈಕ್ ಸವಾರರು ಎಂದು ತಿಳಿದು ಬಂದಿದೆ. ಮತ್ತೊಬ್ಬನ ಸ್ಥಿತಿ ಚಿಂತಾಜನಕವಾಗಿದ್ದು ಆಸ್ಪತ್ರೆಗೆ ಸಾಗಿಸಲಾಗಿದೆ.
ಘಟನೆ ಹಿನ್ನಲೆ:
ಕಲಬುರ್ಗಿ ಜಿಲ್ಲೆಯ ಅಪ್ಜಲಪುರದಿಂದ ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೆ ಬೈಕ್ ಸವಾರಿ ಹೊರಟಿದ್ದ ಯುವಕರ ತಂಡ, ಮತ್ತೊಂದೆಡೆ ಸ್ಥಳೀಯವಾಗಿ ಹೋಗುತ್ತಿರುವ ಬೈಕ್ ಗಳ ನಡುವೆ ಡಿಕ್ಕಿಯಾಗಿ ಈ ದುರ್ಘಟನೆ ನಡೆದಿದೆ ಎನ್ನಲಾಗ್ತಿದೆ.
ಅಪ್ಜಲಪುರ ಮೂಲದ 7 ಜನರು 4 ಬೈಕ್ ಗಳ ಮೇಲೆ ಅಂಜನಾದ್ರಿ ಬೆಟ್ಟಕ್ಕೆ ಹೋಗುವಾಗ ದೇವರಹಿಪ್ಪರಗಿ ಹೂವಿನಹಿಪ್ಪರಗಿ ರಸ್ತೆ ಮಧ್ಯೆ ರಾತ್ರಿ ಸುಮಾರು 1 ಗಂಟೆ ಟೈಂನಲ್ಲಿ ಎದುರಿಗೆ ಬರ್ತಿದ್ದ ಮುದ್ದೇಬಿಹಾಳ ಮೂಲದ ಬೈಕ್ ನಡುವೆ ಅಪಘಾತವಾಗಿದೆ. ಬೈಕ್ ವೊಂದಕ್ಕೆ ಲೈಟ್ ಇಲ್ಲದಿರುವುದಕ್ಕೆ ರೋಡ್ ಕ್ರಾಸ್ ಮಾಡುವಾಗ ಈ ಘಟನೆ ನಡೆದಿದ್ದು, ಸ್ಥಳೀಯರು ಇಬ್ಬರು, ಅಪ್ಜಲಪುರ ಮೂಲದ ಓರ್ವ ಸಾವನ್ನಪ್ಪಿದ್ದು, ಇನ್ನೊಬ್ಬ ಗಾಯಗೊಂಡಿದ್ದು ವಿಜಯಪುರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಬಗ್ಗೆ ತನಿಖೆ ನಡೆದಿದೆ.
ಅಮುಪಮ ಅಗರವಾಲ್, ಎಸ್ಪಿ, ವಿಜಯಪುರ
ಆದ್ರೇ, ಸ್ಥಳದಲ್ಲಿ ಜಖಂ ಆಗಿ ನಿಂತ ಇನ್ನೆರೆಡು ಬೈಕ್ ಗಳಿಂದ ಅನುಮಾನ ಮೂಡಿಸಿದೆ. ವೇಗವಾಗಿ ಬಂದು ಬೈಕ್ ಗಳು ಡಿಕ್ಕಿ ಹೊಡೆದರೂ ಸಹ ಮೃತಪಟ್ಟವರಿಗೆ ಕೇವಲ ತಲೆಗೆ ಗಾಯಗಳಾಗಿವೆ. ಮೈ ಮೇಲೆ ಗಾಯಗಳಿಲ್ಲ ಎಂದು ಸ್ಥಳೀಯರು ಹೇಳ್ತಿದ್ದಾರೆ. ಅಲ್ಲದೇ, ಉಳಿದ ಬೈಕ್ ಗಳ ಸವಾರರ ಬಗ್ಗೆ ಯಾವುದೇ ಗುರುತು ಪತ್ತೆಯಾಗಿಲ್ಲ. ಅವರ ಬಗ್ಗೆ ಮಾಹಿತಿ ಇಲ್ವಂತೆ, ಹೀಗಾಗಿ ಇದು ನಿಜಕ್ಕೂ ಅಪಘಾತವೋ? ಕೊಲೆಯೋ? ಅನ್ನೋ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ. ಈ ಕುರಿತು ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.