ಪ್ರಜಾಸ್ತ್ರ ಸುದ್ದಿ
ವಿಜಯಪುರ: ಕೋವಿಡ್ 19 ಹಿನ್ನೆಲೆಯಲ್ಲಿ ಮಾಸ್ಕ್ ಹಾಕದವರಿಗೆ ದಂಡ ಹಾಕಲಾಗ್ತಿದೆ. ಈ ವಿಚಾರಕ್ಕೆ ನಗರದಲ್ಲಿ ಗಲಾಟೆ ನಡೆದಿದೆ. ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಬೈಕ್ ಸವಾರರ ವಾಗ್ವಾದ ನಡೆಸಿದ ಘಟನೆ ಗಾಂಧಿ ಚೌಕ್ ಪೊಲೀಸ್ ಠಾಣೆ ಎದುರು ನಡೆದಿದೆ.
ಮಾಸ್ಕ್ ಹಾಕದೇ ಬೈಕ್ ಮೇಲೆ ಹೊರಟ್ಟಿದ್ದ ಸವಾರನನ್ನ ಹಿಡಿದಿದ್ದಾರೆ. ಅಲ್ದೇ ಬೈಕ್ ಕೀ ಕಿತ್ತುಕೊಂಡು ದಂಡ ವಿಧಿಸಲು ಮುಂದಾಗಿದ ಪಾಲಿಕೆ ಅಧಿಕಾರಿಗಳ ವಿರುದ್ಧ ಸವಾರ ಆಕ್ರೋಶ ವ್ಯಕ್ತಪಡಿಸಿದ್ದಾನೆ.
ದಂಡ ಹಾಕುವ ಮುನ್ನ ಜಾಗೃತಿ ಮೂಡಿಸಿ, ಎಲ್ಲೆಡೆ ಬೋರ್ಡ್ ಹಾಕಿ ಎಂದ ಆತ, ಬೈಕ್ ಕೀ ಕಿತ್ತುಕೊಳ್ಳುವ ಅಧಿಕಾರ ಯಾರು ನಿಮ್ಗೆ ಕೊಟ್ಟಿದ್ದಾರೆ ಎಂದು ಜಟಾಪಟಿ ನಡೆಸಿದ. ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಗಾಂಧಿ ಚೌಕ್ ಪೊಲೀಸರು ಹಾಗೂ ಸಂಚಾರಿ ಪೊಲೀಸರು ಪರಿಸ್ಥಿತಿ ಶಾಂತಗೊಳಿಸಲು ನೋಡಿದ್ರು. ಒಟ್ಟಿನಲ್ಲಿ ಸಾರ್ಜನಿಕರ ಮೇಲೆ ಮಾಸ್ಕ್ ದಂಡದ ಬಿಸಿ ಗುಮ್ಮಟನಗರಿಯಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.