ಕಾರು ಅಪಘಾತ: ವಿಜಯಪುರ ಮೂಲದ ನಾಲ್ವರ ಸಾವು

190

ಪ್ರಜಾಸ್ತ್ರ ಸುದ್ದಿ

ಬಾಗಲಕೋಟೆ: ಕಬ್ಬು ತುಂಬಿಕೊಂಡು ನಿಂತಿದ್ದ ಟ್ರ್ಯಾಕ್ಟರ್ ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮೃತಪಟ್ಟ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ. ತುಂಬರಮಟ್ಟಿ ಕ್ರಾಸ್ ಹತ್ತಿರ ಅಪಘಾತ ನಡೆದಿದೆ.

ಅಪಘಾತದಲ್ಲಿ ವಿಜಯಪುರದ ಹೊನಗನಹಳ್ಳಿ ಗ್ರಾಮದ ನಾಲ್ವರು ಮೃತಪಟ್ಟಿದ್ದಾರೆ. ಕಾಮಾಕ್ಷಿ ಬಡಗೇರ(35), ಕಲ್ಲಪ್ಪ ಕೌಟಗಿ(34), ತುಕಾರಾಮ್ ತಾಳೇವಾಡಿ(30) ಹಾಗೂ ಮಲ್ಲು ಪೂಜಾರಿ(24) ಮೃತ ದುರ್ದೈವಿಗಳು. ಸ್ಥಳಕ್ಕೆ ಪೊಲೀಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.




Leave a Reply

Your email address will not be published. Required fields are marked *

error: Content is protected !!