ಮುದ್ದೇಬಿಹಾಳ: ರಾಜ್ಯ ಬಿಜೆಪಿ ಸರ್ಕಾರ ಪರ್ಸೆಂಟ್ ನಲ್ಲಿ ಸರ್ಕಾರ ನಡೆಸುತ್ತಿದೆ ಎಂದು ಮುದ್ದೇಬಿಹಾಳ ಮಾಜಿ ಶಾಸಕ ಸಿ.ಎಸ್. ನಾಡಗೌಡ ಗಂಭೀರವಾಗಿ ಆರೋಪಿಸಿದ್ದಾರೆ. ಮುದ್ದೇಬಿಹಾಳದಲ್ಲಿ ಮಾತ್ನಾಡಿದ ಅವರು, ಸಿದ್ದರಾಮಯ್ಯನವರು ಸಿಎಂ ಆದಾಗ ಬಿಜೆಪಿನವರು 10% ಸರ್ಕಾರ ಎಂದು ಆರೋಪಿಸಿದ್ರು.
ಸಿದ್ದರಾಮಯ್ಯನವರು ಯಾವುದೇ ಭ್ರಷ್ಟಾಚಾರ ಮಾಡದ ವ್ಯಕ್ತಿ ಮೇಲೆ ಸುಖಾಸುಮ್ಮನೇ ಆರೋಪ ಮಾಡುತ್ತಿದ್ರು. ಇದೀಗ ಬಿಜೆಪಿ ಸರ್ಕಾರ ಶೇಕಡ 20 ಪರ್ಸೆಂಟ್ ಸರ್ಕಾರವಾಗಿದೆ ಎಂದು ವಾಗ್ದಾಳಿ ನಡೆಸಿದ್ರು. ಇನ್ನು ಕುದುರೆ ವ್ಯಾಪಾರ ಮಾಡೋರಿಗೆ ಅವಕಾಶ ಕೊಡಬೇಡಿ. ಕುದುರೆ ವ್ಯಾಪಾರ ಮಾಡೋರೆಲ್ಲ ವಿಧಾನಸೌಧದಲ್ಲಿ ಕುಳಿತರೆ ರಾಜಕೀಯದಲ್ಲಿ ನಿಯತ್ತು ಇರೋದಿಲ್ಲವೆಂದು ಜನರಿಗೆ ಮನವಿ ಮಾಡಿದ್ರು. ಅಲ್ಲದೇ, ವಿಧಾನಸೌಧಕ್ಕೆ ಹೋದವರು ಕುದುರೆ ವ್ಯಾಪಾರವನ್ನೇ ಮಾಡುತ್ತಾರೆಂದು ಪರೋಕ್ಷವಾಗಿ ಸಿಎಂ ಬಿಎಸ್ವೈ ವಿರುದ್ಧ ನಾಡಗೌಡ ಹರಿಹಾಯ್ದರು.