ಪ್ರಜಾಸ್ತ್ರ ಸುದ್ದಿ
ನವದೆಹಲಿ: ಚೀನಾ ಸೈನಿಕರು ಭಾರತದ ಗಡಿ ಪ್ರವೇಶ ಮಾಡಿಲ್ಲವೆಂದು ಪ್ರಧಾನಿ ಮೋದಿ ಹೇಳ್ತಿದ್ದಾರೆ. ಹೀಗೆ ಹೇಳುವ ಮೂಲಕ ಚೀನಾಗೆ ಕ್ಲೀನ್ ಚಿಟ್ ನೀಡುತ್ತಿದ್ದಾರೆಯೇ ಎಂದು, ಕೇಂದ್ರ ಸಚಿವ ಪಿ.ಚಿದಂಬರಂ ಪ್ರಶ್ನಿಸಿದ್ದಾರೆ.
ಟ್ವೀಟರ್ ಮೂಲಕ ಪ್ರಧಾನಿಗೆ ಪ್ರಶ್ನೆ ಮಾಡಿರುವ ಪಿ.ಚಿದಂಬರಂ, ಒಂದು ವೇಳೆ ಚೀನಾ ಸೈನಿಕರು ಗಡಿ ಪ್ರವೇಶ ಮಾಡದೆ ಇರೋದು ಸತ್ಯವಾದ್ರೆ, ಮೇ 5-6ರ ಗಡಿಬಿಡಿ ಏನಿತ್ತು? ಜೂನ್ 16-17ರಂದು ಸೈನಿಕರ ನಡುವೆ ಜಗಳವೇಕೆ ಆಯಿತು? ಭಾರತ ಯಾಕೆ 20 ಜನ ಸೈನಿಕರನ್ನ ಕಳೆದುಕೊಂಡಿತ್ತು ಎಂದು ಪ್ರಶ್ನೆಗಳನ್ನ ಕೇಳಿದ್ದಾರೆ.
ಹೀಗೆ ಟ್ವೀಟರ್ ಮೂಲಕ ಪ್ರಧಾನಿ ಮೋದಿಗೆ ಪ್ರಶ್ನೆಗಳನ್ನ ಕೇಳಿರುವ ಪಿ.ಚಿದಂಬರಂ, ಚೀನಾ ವಿಚಾರದಲ್ಲಿ ಮೋದಿಯ ನಡೆ ಏನು ಅನ್ನೋದರ ಕುರಿತು ತಿಳಿಸಲು ಹೇಳಿದ್ದಾರೆ.