ಕಂಗನಾಗೆ ಜೈಲು ಅಥವ ಆತ್ಮಹತ್ಯೆ ಅಂಜಿಕೆ ಹಾಕಿದ್ಯಾರು?

371

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಟ ಸುಶಾಂತ ಸಿಂಗ್ ರಜಪೂತ್ ಸಾವಿನ ಬಳಿಕ, ಬಾಲಿವುಡ್ ದುನಿಯಾದಲ್ಲಿ ಭರ್ಜರಿಯಾಗಿ ಸದ್ದು ಮಾಡ್ತಿರುವುದು ಸ್ವಜನಪಕ್ಷಪಾತದ ಬಗ್ಗೆ. ಬಿಟೌನ್ ನಲ್ಲಿ ಭದ್ರ ನೆಲೆ ಕಂಡುಕೊಂಡು ಹೆಸರು ಮಾಡಿದವರು ಸೈಲೆಂಟ್ ಆಗಿದ್ರೆ, ಸ್ಟಾರ್ ಪಟ್ಟ ಪಡೆದ್ರೂ ತಮಗಾಗ್ತಿರುವ ಕಿರುಕುಳ ಬಗ್ಗೆ ಕೆಲವರು ಮೌನ ಮುರಿಯುತ್ತಿದ್ದಾರೆ. ಅದರಲ್ಲಿ ಕಂಗನಾ ರನೌತ್ ಸಹ ಒಬ್ಬರು.

ಈ ಹಿಂದೆ ಸಹ ನೆಪೋಟಿಸಂ ಬಗ್ಗೆ ಮಾತ್ನಾಡಿದ್ದ ಕಂಗನಾ, ಈಗ ರಾಕೇಶ ರೋಷನ್ ಕುಟುಂಬ ಹಾಗೂ ಜಾವೇದ್ ಅಖ್ತರ್ ಅವರ ಹೆಸರು ಪಸ್ತಾಪ ಮಾಡಿದ್ದಾಳೆ. ಜಾವೇದ್ ಅಖ್ತರ್ ಒಮ್ಮೆ ಮನೆಗೆ ಕರೆದು, ರಾಕೇಶ ರೋಷನ್ ಕುಟುಂಬ ಬಹಳ ದೊಡ್ಡದು. ನೀನು ಅವರ ಕ್ಷಮೆ ಕೇಳು. ಇಲ್ಲದೆ ಹೋದ್ರೆ ಜೈಲು ಅಥವ ಆತ್ಮಹತ್ಯೆಯೊಂದೇ ನಿನಗೆ ಇರುವ ದಾರಿ ಎಂದು ಹೇಳಿದ್ರಂತೆ.

ನಟ ಹೃತಿಕ ರೋಷನ್ ಹಾಗೂ ಕಂಗನಾ ರನೌತ್ ನಡುವೆ ಕಳೆದ ಕೆಲ ವರ್ಷಗಳಿಂದ ಗಲಾಟೆ ನಡೆಯುತ್ತಲೇ ಇದೆ. ಅದು ಕೋರ್ಟ್, ಕಚೇರಿ ಸಹ ಆಗಿದೆ. ಬಹುಶಃ ಇದೆ ವಿಚಾರಕ್ಕೆ ಬಿಟೌನ್ ಚಿತ್ರ ಸಾಹಿತಿ ಜಾವೇದ್ ಅಖ್ತರ್ ಕಂಗನಾಗೆ ಹೀಗೆ ಹೇಳಿರಬಹುದು.

ಇನ್ನು ಮುಂದುವರೆದು ಮಾತ್ನಾಡಿರುವ ಕಂಗನಾ, ಬಾಲಿವುಡ್ ನಲ್ಲಿ ಪ್ರತಿಭೆ, ಸ್ವಜನಪಕ್ಷಪಾತ ಒಂದೇ ಕಡೆ ಇರಲು ಸಾಧ್ಯವಿಲ್ಲ. ನಿಜವಾದ ಪ್ರತಿಭೆಯನ್ನ ಇಲ್ಲಿ ಬೆಳೆಯಲು ಬಿಡುವುದಿಲ್ಲವೆಂದು ಸುಶಾಂತ ಹೇಳಿದ್ದನ್ನು ಕೇಳಿದ್ದೇನೆ ಎಂದಿದ್ದಾಳೆ. ನನ್ನ ವಿರುದ್ಧ ಇಡೀ ಚಿತ್ರರಂಗ ಒಂದಾಗಿದೆ. ಹೀಗಾಗಿ ಏನಾಗ್ತಿದೆಯೋ ಎನಿಸಿದೆ. ಆಗಿರುವುದು ಆಗಿದೆ. ಇಂಥಾ ಜನರನ್ನ ಬಯಲಿಗೆ ಎಳೆಯುವ ಕೆಲಸ ಮಾಡ್ತೀನಿ ಎಂದಿದ್ದಾಳೆ.




Leave a Reply

Your email address will not be published. Required fields are marked *

error: Content is protected !!