ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಶ್ರೀರಾಮ್ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ರವಿ ಕೋಕಿತ್ಕರ್ ಹಾಗೂ ಹಿಂದೂ ರಾಷ್ಟ್ರ ಸೇನಾ ಮುಖಂಡ ಮನೋಜ್ ದೇಸೂಕರ್ ಮೇಲಿನ ಗುಂಡಿನ ದಾಳಿ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಪಾಟೀಲ ಮಾಳದ ನಿವಾಸಿ ಅಭಿಜಿತ್ ಸೋಮನಾಥ್, ಬಸ್ತವಾಡದ ರಾಹುಲ್ ನಿಂಗಾಣಿ ಹಾಗೂ ಜ್ಯೋತಿಬಾ ಮುತಗೇಕರ್ ಬಂಧಿತ ಆರೋಪಿಗಳು.
ರವಿ ಹಾಗೂ ಅಭಿಜಿತ್ ನಡುವೆ ರಿಯಲ್ ಎಸ್ಟೇಟ್ ಹಣಕಾಸಿನ ವ್ಯವಹಾರವಿತ್ತು. ಇತ್ತೀಚೆಗೆ ಇವರಲ್ಲಿ ಮನಸ್ತಾಪ ಮೂಡಿತ್ತು. ಹಣಕಾಸಿನ ವ್ಯವಹಾರ ಹಾಗೂ ವೈಯಕ್ತಿಕ ಕಾರಣಕ್ಕೆ ಗುಂಡಿನ ದಾಳಿ ನಡೆದಿದೆ. 18 ಗಂಟೆಯೊಳಗೆ ಪೊಲೀಸರು ಪ್ರಕರಣ ಬೇಧಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ ಬೋರಲಿಂಗಯ್ಯ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇನ್ನು 2020ರಲ್ಲಿ ಅಭಿಜಿತ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಈ ಪ್ರಕರಣದಲ್ಲಿ ರವಿ ಕೋಕಿತ್ಕರ್ ಮೊದಲ ಆರೋಪಿ ಆಗಿದ್ದ ಎಂದು ತಿಳಿಸಿರುವ ಪೊಲೀಸರು ಜನರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದಿದ್ದಾರೆ.