ಪ್ರಜಾಸ್ತ್ರ ಸುದ್ದಿ
ಮೈಸೂರು: ಬಿಜೆಪಿ ಮುಖಂಡ ಹಾಗೂ ಚಿನ್ನದ ವ್ಯಾಪಾರಿ ಜಗನ್ನಾಥ ಶೆಟ್ಟಿ ಹನಿಟ್ರ್ಯಾಫ್ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಎಫ್ಐಆರ್ ನಲ್ಲಿ ದಾಖಲೆಯಾದ ವಿಷಯ ಬೇರೆ, ಅಲ್ಲಿ ನಡೆದಿರುವ ಘಟನೆ ಬೇರೆಯಾಗಿದೆ.
ನಗರದ ದರ್ಶನ್ ಲ್ಯಾಡ್ಜ್ ನಲ್ಲಿ ಕಾಲೇಜು ಉಪನ್ಯಾಸಕ ಎಂದು ಹೇಳಿ ರೂಮ್ ಪಡೆದಿದ್ದರು. ಅವರ ಜೊತೆಗೆ ಯುವತಿಯೊಬ್ಬಳು ಇದ್ದಳಂತೆ. ಅಲ್ಲಿಗೆ ಸಲ್ಮಾ ಗ್ಯಾಂಗ್ ಭೇಟಿ ನೀಡಿ, ಶೆಟ್ಟಿ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಬಯಲಾಗಿದೆ.
ಮಂಡ್ಯ ಪಶ್ಚಿಮ ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಲ್ಮಾ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಮಂಡ್ಯ ಮೂಲದ ಚಿನ್ನದ ವ್ಯಾಪಾರಿ ಹಾಗೂ ಬಿಜೆಪಿ ಮುಖಂಡ ಜಗನ್ನಾಥ್ ಶೆಟ್ಟಿ ಕಾರಿನಲ್ಲಿ ಹೋಗುವಾಗ ಡ್ರಾಪ್ ಕೇಳುವ ನೆಪದಲ್ಲಿ ಬಂದು ಹನಿಟ್ರ್ಯಾಪ್ ಮಾಡಲಾಗಿದೆ ಎಂದು ಈ ಮೊದಲು ಹೇಳಲಾಗಿತ್ತು. ಈಗ ಅದಕ್ಕೆ ಟ್ವಿಸ್ಟ್ ಸಿಕ್ಕಿದೆ.