ಜನಾಕ್ರೋಶಕ್ಕೆ ಮಣಿದ ಕತ್ತಿ

226

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಟಿವಿ, ಪ್ರಿಡ್ಜ್, ಬೈಕ್ ಇದ್ದವರ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗುವುದು ಎಂದಿದ್ದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ ಕತ್ತಿ ಇದೀಗ ಯೂ ಟರ್ನ್ ಹೊಡೆದಿದ್ದಾರೆ. ಜನರ ಆಕ್ರೋಶಕ್ಕೆ ಮಣದಿರುವ ಸಚಿವ ಕತ್ತಿ, ಬಿಪಿಎಲ್ ಕಾರ್ಡ್ ನಿಯಮದಲ್ಲಿ ಯಾವುದೇ ಬದಲಾವಣೆ ಇಲ್ಲ. ಹಿಂದಿನ ನಿಯಮಗಳನ್ನೇ ಮುಂದುವರೆಸುವುದಾಗಿ ಹೇಳಿದ್ದಾರೆ.

ಸಚಿವ ಕತ್ತಿ ಹೇಳಿಕೆಗೆ ಜನರು ಜೊತೆಗೆ ಸ್ವಪಕ್ಷೀಯ ಶಾಸಕರು, ಸಚಿವರು ಸಹ ವಿರೋಧ ವ್ಯಕ್ತಪಡಿಸಿದ್ರು. ವಿರೋಧ ಪಕ್ಷದವರು ಕತ್ತಿ ಹೇಳಿಕೆ ವಿರುದ್ಧ ಕಿಡಿ ಕಾರಿದ್ರು. ಜನಾಕ್ರೋಶಕ್ಕೆ ಮಣಿದ ಕತ್ತಿ ಇದೀಗ ಯೂ ಟರ್ನ್ ಹೊಡೆದು, ಈ ಹಿಂದಿನ ನಿಯಮಗಳನ್ನ ಮುಂದುವರೆಸುವುದಾಗಿ ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!